ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ ಹೆಗಡೆ ಮಾತನಾಡಿ, ‘ಕಡಿಮೆ ವಯಸ್ಸಿನಲ್ಲಿ ಕುಂಜಾಲು ಶೈಲಿಯ ಪರಂಪರೆಯನ್ನು ಅಳವಡಿಸಿಕೊಂಡು ಸಾಧನೆ ಮಾಡಿ, ಅಮರವಾದ ಕಾಳಿಂಗ ನಾವಡರ ಕೀರ್ತಿ ಯುವ ಪೀಳಿಗೆಗೆ ಮಾದರಿ. ಅಕಾಡೆಮಿಯು ಯಕ್ಷಗಾನ ಪರಂಪರೆಯ ಉಳಿವಿಗಾಗಿ ವಿಚಾರ ಮಂಥನ, ದಾಖಲೀಕರಣ, ಸಮಗ್ರ ದರ್ಶನವನ್ನು ಅನಾವರಣಗೊಳಿಸಲು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ಯಕ್ಷಗಾನ ತರಬೇತಿಯನ್ನು ನೀಡುವುದರ ಜೊತೆಗೆ ಪರಂಪರೆಯ ಮೌಲ್ಯವನ್ನು ವಿಸ್ತರಿಸುವ ಕಾರ್ಯವನ್ನು ಮಾಡುತ್ತಿದೆ. ಸಂರಕ್ಷಣಾ, ಸಂವರ್ಧನಾ ಇತ್ಯಾದಿ ಹೆಸರಿನಲ್ಲಿ ಯಕ್ಷಗಾನದ ಮೌಲ್ಯವನ್ನು ಎತ್ತಿ ಹಿಡಿಯುವ ಕಾರ್ಯ ಅಕಾಡೆಮಿ ನಿರ್ವಹಿಸುತ್ತಿದೆ’ ಎಂದರು.