<p><strong>ಕಡೂರು: </strong>ಯಶಸ್ವಿನಿ ಯೋಜನೆ ಯಲ್ಲಿ ನೋಂದಾಯಿಸಿದ್ದರೂ ಖಾಸಗಿ ನರ್ಸಿಂಗ್ ಹೋಂನಲ್ಲಿ ಹೆಚ್ಚಿನ ಹಣ ವಸೂಲಿ ಮಾಡಿದ್ದಾರೆ ಎಂದು ಆರೋ ಪಿಸಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.<br /> <br /> ಸಿಂಗಟಗೆರೆ ಹೋಬಳಿಯ ಸೋಮನ ಹಳ್ಳಿಯ ಅನುಸೂಯ ಅವರು ಗರ್ಭ ಕೋಶದ ತೊಂದರೆಯಿಂದ ಚಿಕಿತ್ಸೆಗಾಗಿ 22ರ ಸೋಮವಾರ ಟಿ.ಬಿ.ರಸ್ತೆಯಲ್ಲಿ ರುವ ಬಾಲಾಜಿ ನರ್ಸಿಂಗ್ ಹೋಂನಲ್ಲಿ ದಾಖಲಾಗಿದ್ದರು. ದಾಖಲಾದ ಕೂಡಲೇ ₨2 ಸಾವಿರವನ್ನು ಔಷಧಿ ಮತ್ತು ರಕ್ತ ನೀಡಲು ₨1600 ಪಡೆದುಕೊಂಡಿದ್ದಾರೆ. ನಂತರ ಗರ್ಭಕೋಶದ ಶಸ್ತ್ರ ಚಿಕಿತ್ಸಗೆ ₨10 ಸಾವಿರ ಹಾಗೂ ಇತರೆ ವೆಚ್ಚ ನೀಡಬೇಕೆಂದು ವೈದ್ಯರು ಕೇಳಿದ್ದಾರೆ.<br /> <br /> ಅನುಸೂಯ ಅವರು ತಮ್ಮ ಯಶಸ್ವಿನಿ ಯೋಜನೆಯ ಕಾರ್ಡ್ ಇದೆ ಎಂದು ಹೇಳಿ ಶಸ್ತ್ರಚಿಕಿತ್ಸೆ ವೆಚ್ಚ ವಿನಾ ಯಿತಿ ಮಾಡಲು ಕೇಳಿದರೂ ವೈದ್ಯರು ಒಪ್ಪಿಲ್ಲ. ಆಗ ಅನುಸೂಯಮ್ಮ ಅವರ ಪತಿ ತಿರುಮಲಯ್ಯ ಅವರು ಕರವೇ ಕಾರ್ಯ ಕರ್ತರಿಗೆ ಈ ವಿಷಯ ತಿಳಿಸಿದ್ದಾರೆ.<br /> <br /> ಬುಧವಾರ ಬೆಳಿಗ್ಗೆ ನರ್ಸಿಂಗ್ ಹೋಂ ಮುಂದೆ ಜಮಾಯಿಸಿದ ಕರವೇ ಕಾರ್ಯ ಕರ್ತರು ವೈದ್ಯರ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು. ಪ್ರತಿಭಟನಾ ಕಾರರ ಬಳಿ ಬಂದ ನರ್ಸಿಂಗ್ ಹೋಂ ವ್ಯವಸ್ಥಾಪಕ ಡಾ.ರಮೇಶ್ ಘಟನೆ ಬಗ್ಗೆ ಪ್ರತಿಕ್ರಿಯಿಸಿ ಸರ್ಕಾರದ ಯಶಸ್ವಿನಿ ಕಾರ್ಡಿನ ಪ್ರಕಾರ ಕೇವಲ ₨12 ಸಾವಿರ ಮೊತ್ತವನ್ನು ಮಾತ್ರ ಶಸ್ತ್ರ ಚಿಕಿತ್ಸೆಗಾಗಿ ವಿನಾಯ್ತಿ ಇರುತ್ತದೆ. ಉಳಿದ ಎಕ್ಸರೇ, ರಕ್ತಪರೀಕ್ಷೆ, ಸ್ಕ್ಯಾನಿಂಗ್ ಮತ್ತಿತರ ಪರೀಕ್ಷೆ ಗಳಿಗೆ ರೋಗಿಗಳು ಶುಲ್ಕವನ್ನು ಭರಿಸ ಬೇಕಾಗುತ್ತದೆ ಎಂದು ಉತ್ತರಿಸಿದರು.<br /> <br /> ಇದರಿಂದ ತೃಪ್ತರಾಗದ ಕರವೇ ಕಾರ್ಯಕರ್ತರು ಈ ಬಗ್ಗೆ ಜಿಲ್ಲಾ ವೈದ್ಯಾಧಿ ಕಾರಿಗಳಿಗೆ ಹಾಗೂ ಯಶಸ್ವಿನಿ ಯೋಜ ನೆಯ ಅಧಿಕಾರಿಗಳಿಗೆ ದೂರು ಸಲ್ಲಿಸಿ ಕ್ರಮ ಕೈಗೊಳ್ಳಲು ಒತ್ತಾಯಿ ಸುವುದಾಗಿ ತಿಳಿಸಿದರು. ಕ್ರಮ ಕೈಗೊಳ್ಳಲು ತಡ ಮಾಡಿದರೆ ಹೋರಾಟ ತೀವ್ರಗೊಳಿ ಸುವುದಾಗಿ ಎಚ್ಚರಿಸಿದರು.<br /> <br /> ಕರವೇ(ಪ್ರವೀಣ್ ಶೆಟ್ಟಿ ಬಣ) ಜಿಲ್ಲಾ ಧ್ಯಕ್ಷ ವಿಶ್ವನಾಥ್ ಕಾಶಿ, ತಾಲ್ಲೂಕು ಅಧ್ಯಕ್ಷ ವಿಜಯಕುಮಾರ್, ತರೀಕೆರೆ ದಿನೇಶ್, ಪ್ಯಾಟ್ರಿಕ್ ಆನಂದ್, ಜಾನ್ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಡೂರು: </strong>ಯಶಸ್ವಿನಿ ಯೋಜನೆ ಯಲ್ಲಿ ನೋಂದಾಯಿಸಿದ್ದರೂ ಖಾಸಗಿ ನರ್ಸಿಂಗ್ ಹೋಂನಲ್ಲಿ ಹೆಚ್ಚಿನ ಹಣ ವಸೂಲಿ ಮಾಡಿದ್ದಾರೆ ಎಂದು ಆರೋ ಪಿಸಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.<br /> <br /> ಸಿಂಗಟಗೆರೆ ಹೋಬಳಿಯ ಸೋಮನ ಹಳ್ಳಿಯ ಅನುಸೂಯ ಅವರು ಗರ್ಭ ಕೋಶದ ತೊಂದರೆಯಿಂದ ಚಿಕಿತ್ಸೆಗಾಗಿ 22ರ ಸೋಮವಾರ ಟಿ.ಬಿ.ರಸ್ತೆಯಲ್ಲಿ ರುವ ಬಾಲಾಜಿ ನರ್ಸಿಂಗ್ ಹೋಂನಲ್ಲಿ ದಾಖಲಾಗಿದ್ದರು. ದಾಖಲಾದ ಕೂಡಲೇ ₨2 ಸಾವಿರವನ್ನು ಔಷಧಿ ಮತ್ತು ರಕ್ತ ನೀಡಲು ₨1600 ಪಡೆದುಕೊಂಡಿದ್ದಾರೆ. ನಂತರ ಗರ್ಭಕೋಶದ ಶಸ್ತ್ರ ಚಿಕಿತ್ಸಗೆ ₨10 ಸಾವಿರ ಹಾಗೂ ಇತರೆ ವೆಚ್ಚ ನೀಡಬೇಕೆಂದು ವೈದ್ಯರು ಕೇಳಿದ್ದಾರೆ.<br /> <br /> ಅನುಸೂಯ ಅವರು ತಮ್ಮ ಯಶಸ್ವಿನಿ ಯೋಜನೆಯ ಕಾರ್ಡ್ ಇದೆ ಎಂದು ಹೇಳಿ ಶಸ್ತ್ರಚಿಕಿತ್ಸೆ ವೆಚ್ಚ ವಿನಾ ಯಿತಿ ಮಾಡಲು ಕೇಳಿದರೂ ವೈದ್ಯರು ಒಪ್ಪಿಲ್ಲ. ಆಗ ಅನುಸೂಯಮ್ಮ ಅವರ ಪತಿ ತಿರುಮಲಯ್ಯ ಅವರು ಕರವೇ ಕಾರ್ಯ ಕರ್ತರಿಗೆ ಈ ವಿಷಯ ತಿಳಿಸಿದ್ದಾರೆ.<br /> <br /> ಬುಧವಾರ ಬೆಳಿಗ್ಗೆ ನರ್ಸಿಂಗ್ ಹೋಂ ಮುಂದೆ ಜಮಾಯಿಸಿದ ಕರವೇ ಕಾರ್ಯ ಕರ್ತರು ವೈದ್ಯರ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು. ಪ್ರತಿಭಟನಾ ಕಾರರ ಬಳಿ ಬಂದ ನರ್ಸಿಂಗ್ ಹೋಂ ವ್ಯವಸ್ಥಾಪಕ ಡಾ.ರಮೇಶ್ ಘಟನೆ ಬಗ್ಗೆ ಪ್ರತಿಕ್ರಿಯಿಸಿ ಸರ್ಕಾರದ ಯಶಸ್ವಿನಿ ಕಾರ್ಡಿನ ಪ್ರಕಾರ ಕೇವಲ ₨12 ಸಾವಿರ ಮೊತ್ತವನ್ನು ಮಾತ್ರ ಶಸ್ತ್ರ ಚಿಕಿತ್ಸೆಗಾಗಿ ವಿನಾಯ್ತಿ ಇರುತ್ತದೆ. ಉಳಿದ ಎಕ್ಸರೇ, ರಕ್ತಪರೀಕ್ಷೆ, ಸ್ಕ್ಯಾನಿಂಗ್ ಮತ್ತಿತರ ಪರೀಕ್ಷೆ ಗಳಿಗೆ ರೋಗಿಗಳು ಶುಲ್ಕವನ್ನು ಭರಿಸ ಬೇಕಾಗುತ್ತದೆ ಎಂದು ಉತ್ತರಿಸಿದರು.<br /> <br /> ಇದರಿಂದ ತೃಪ್ತರಾಗದ ಕರವೇ ಕಾರ್ಯಕರ್ತರು ಈ ಬಗ್ಗೆ ಜಿಲ್ಲಾ ವೈದ್ಯಾಧಿ ಕಾರಿಗಳಿಗೆ ಹಾಗೂ ಯಶಸ್ವಿನಿ ಯೋಜ ನೆಯ ಅಧಿಕಾರಿಗಳಿಗೆ ದೂರು ಸಲ್ಲಿಸಿ ಕ್ರಮ ಕೈಗೊಳ್ಳಲು ಒತ್ತಾಯಿ ಸುವುದಾಗಿ ತಿಳಿಸಿದರು. ಕ್ರಮ ಕೈಗೊಳ್ಳಲು ತಡ ಮಾಡಿದರೆ ಹೋರಾಟ ತೀವ್ರಗೊಳಿ ಸುವುದಾಗಿ ಎಚ್ಚರಿಸಿದರು.<br /> <br /> ಕರವೇ(ಪ್ರವೀಣ್ ಶೆಟ್ಟಿ ಬಣ) ಜಿಲ್ಲಾ ಧ್ಯಕ್ಷ ವಿಶ್ವನಾಥ್ ಕಾಶಿ, ತಾಲ್ಲೂಕು ಅಧ್ಯಕ್ಷ ವಿಜಯಕುಮಾರ್, ತರೀಕೆರೆ ದಿನೇಶ್, ಪ್ಯಾಟ್ರಿಕ್ ಆನಂದ್, ಜಾನ್ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>