‘ಸೆಪ್ಟಂಬರ್ ತಿಂಗಳ ಅಂತ್ಯದಲ್ಲಿ ಗೌರಸಮುದ್ರದ ತಮಲು ಪ್ರದೇಶದಲ್ಲಿ ಮಾರಮ್ಮನ ಮರಿ ಪರಿಸೆ ನಡೆದಿತ್ತು. ಆ ದಿನ ನೂರಾರು ಭಕ್ತರು ಊಟ ಮಾಡಿ ಹೆಚ್ಚುವರಿಯಾಗಿದ್ದ ಅನ್ನವನ್ನು ಜಾತ್ರಾ ಸ್ಥಳದಲ್ಲಿ ಬಿಸಾಡಿದ್ದರು. ಆ ಅನ್ನ ಹಳಸಿತ್ತು. ಆ ಅನ್ನ ತಿಂದು 17 ಮೇಕೆಗಳು ಸತ್ತಿವೆ. ಸರ್ಕಾರದ ಅನುಗ್ರಹ ಯೋಜನೆಯಡಿ ಮೃತ ಮೇಕೆಗಳಿಗೆ ತಲಾ ₹ 5,000 ಪರಿಹಾರ ನೀಡಲಾಗುವುದು’ ಎಂದು ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.