‘ಕಾಲಿಗೆ ಚಪ್ಪಲಿ, ಹೊಟ್ಟೆ ತುಂಬ ಊಟವಿಲ್ಲದೇ ಚಿತ್ರದುರ್ಗದಿಂದ ಬೆಂಗಳೂರಿನತ್ತ ಹೆಜ್ಜೆ ಹಾಕಿದರು. ತುಮಕೂರು ತಲುಪಿದರೂ ಅವರ ಕಣ್ಣಲ್ಲಿ ಹೋರಾಟದ ಕಿಚ್ಚು ಆರಿರಲಿಲ್ಲ. ಎಲ್ಲವನ್ನೂ ಲಾಭಕೋರತನದಿಂದ ನೋಡುವ ರಾಜಕಾರಣಿಗಳು ಮಹಿಳೆಯರ ಹೋರಾಟಕ್ಕೆ ಸ್ಪಂದಿಸಿಲ್ಲ. ಇನ್ನೂ ಸಾವಿರಾರು ರೇಣುಕಮ್ಮಂದಿರು ಜನ್ಮ ತಾಳಬೇಕು. ಬೀದಿಗೆ ಇಳಿದು ಹೋರಾಟವನ್ನು ತೀವ್ರಗೊಳಿಸಬೇಕು’ ಎಂದು ಹೇಳಿದ್ದಾರೆ.