ಹೊಸದುರ್ಗ: ಬಾವಿಯಲ್ಲಿ ಬಿದ್ದಿದ್ದ ಕುರಿಯನ್ನು ರಕ್ಷಿಸಲು ಹೋದ ಬಾಲಕನೊಬ್ಬ ಬಾವಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಶಿವನೇಕಟ್ಟೆ ಗ್ರಾಮದ ವೈ.ಟಿ. ರಾಮಚಂದ್ರಪ್ಪ ಅವರ ತೋಟದಲ್ಲಿ ಭಾನುವಾರ ನಡೆದಿದೆ.
ಚಿತ್ರದುರ್ಗ ತಾಲ್ಲೂಕಿನ ಗಂಜಿಗಟ್ಟೆ ಗ್ರಾಮದ ಕೃಷ್ಣಮೂರ್ತಿ (17) ಮೃತ ಬಾಲಕ. ಕುರಿ ಮೇಯಿಸಲು ಶಿವನೇಕಟ್ಟೆ ಗ್ರಾಮದ ತೋಟಕ್ಕೆ ತೆರಳಿದ್ದ ಸಂದರ್ಭದಲ್ಲಿ ಕುರಿ ಬಾವಿಯಲ್ಲಿ ಬಿದ್ದಿರುವುದನ್ನು ಗಮನಿ ರಕ್ಷಿಸಲು ಹೋದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಈ ಕುರಿತು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.