ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಅಂತ್ಯಸಂಸ್ಕಾರಕ್ಕೆ ಸುಸಜ್ಜಿತ ಸ್ಮಶಾನ ಭೂಮಿ ಕಲ್ಪಿಸಿ, ಮೂಲಸೌಕರ್ಯಗಳನ್ನು ಒದಗಿಸಬೇಕು. ಅಧಿಕಾರಿಗಳು ಕೂಡಲೇ ಇತ್ತ ಗಮನಹರಿಸಿ ಗ್ರಾಮಸ್ಥರ ಪರದಾಟ ತಪ್ಪಿಸಬೇಕು ಎಂದು ಗ್ರಾಮಸ್ಥರಾದ ಎಸ್.ಎಂ. ಗಿರೀಶ್, ನಿಂಗರಾಜ್, ಪರಸಪ್ಪ, ತಿಮ್ಮಣ್ಣ, ವಿಜಯಕುಮಾರ್, ಪ್ರಶಾಂತ್, ಆನಂದ್ ಒತ್ತಾಯಿಸಿದ್ದಾರೆ.