‘ನ. 29ರ ವೇಳೆಗೆ ಜಲಾಶಯದ ನೀರಿನಮಟ್ಟ 102 ಅಡಿ ಮುಟ್ಟಲಿದ್ದು, ಅಚ್ಚುಕಟ್ಟು ಪ್ರದೇಶದ ತೆಂಗು, ಅಡಿಕೆ, ಬಾಳೆ, ಶೇಂಗಾ, ರಾಗಿ, ತರಕಾರಿ ಬೆಳೆಗಳ ಉಳಿವಿಗೆ ವರ್ಷದಲ್ಲಿ ಆರು ಬಾರಿ ನೀರು ಹರಿಸಬೇಕಿದೆ. ಹೀಗಾಗಿ, ಮೊದಲ ನೀರನ್ನು ಜ. 1ರಿಂದ ಹರಿಸಬೇಕು. ಈ ಬಗ್ಗೆ ಕೃಷಿ, ತೋಟಗಾರಿಕೆ ಅಧಿಕಾರಿಗಳು, ರೈತ ಸಂಘದ ಪದಾಧಿಕಾರಿಗಳ ಜತೆ ಚರ್ಚಿಸಿ ನೀರು ಬಿಡುವ ಕುರಿತು ಕ್ಯಾಲೆಂಡರ್ ಬಿಡುಗಡೆ ಮಾಡಬೇಕು’ ಎಂದು ರೈತ ಮುಖಂಡರು ಒತ್ತಾಯಿದರು.