ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ‘ಲಿಂಗಾಯತ ಧರ್ಮದ ವಿಚಾರ ಬಂದಾಗ ಬಹುತೇಕರು ಗಮನಿಸುವುದು ಚೆನ್ನಬಸವಣ್ಣನವರ ವಚನಗಳನ್ನು. ಅವರು ಈ ಧರ್ಮದ ಸೂತ್ರಗಳಾದ ಅಷ್ಟಾವರಣ, ಪಂಚಾಚಾರ, ಷಟ್ಸ್ಥಲಗಳ ಬಗ್ಗೆ ಮಾತನಾಡಬಲ್ಲವರಾಗಿದ್ದರು. ಇವತ್ತು ವಿಚಾರವಂತರೆನ್ನುವವರು ಬಹುತೇಕ ಶರಣರ ತತ್ವಗಳನ್ನು ಒಪ್ಪುವರು. ಬುದ್ಧನ ನಂತರ ಸಮಾಜಮುಖಿ ಚಿಂತನೆ ಮಾಡಿದವರು ಬಸವಣ್ಣ ಎಂದು ಬಾಯ್ತುಂಬ ಹೊಗಳುವರು. ಆದರೆ, ಅವರು ಹೇಳುವ ಎಲ್ಲ ವಿಚಾರಗಳನ್ನೂ ಪರಿಪಾಲಿಸುವಲ್ಲಿ ಸೋಲುವರು’ ಎಂದು ಬೇಸರ ವ್ಯಕ್ತಪಡಿಸಿದರು.