<p><strong>ಹಿರಿಯೂರು:</strong> ರಾಜ್ಯದಲ್ಲಿ ದಲಿತರ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ ತರ್ಕಬದ್ಧ ಹೋರಾಟ ನಡೆಸುವ ಮೂಲಕ ಆಳುವವರನ್ನು ಎಚ್ಚರಿಸಿದ, ದಲಿತರಿಗೆ ದನಿಯಾದ ಕೀರ್ತಿ ಪ್ರೊ.ಬಿ.ಕೃಷ್ಣಪ್ಪ ಅವರಿಗೆ ಸಲ್ಲುತ್ತದೆ ಎಂದು ಜನತಂತ್ರ ಉಳಿಸಿ ಆಂದೋಲನದ ರಾಜ್ಯ ಘಟಕದ ಸಂಚಾಲಕ ಪ್ರೊ.ಸಿ. ಕೆ. ಮಹೇಶ್ ಹೇಳಿದರು. </p>.<p>ನಗರದ ನೆಹರು ಮೈದಾನದಲ್ಲಿರುವ ರೋಟರಿ ಸಭಾಂಗಣದಲ್ಲಿ ಜನತಂತ್ರ ಉಳಿಸಿ ಆಂದೋಲನ– ಕರ್ನಾಟಕದ ಜಿಲ್ಲಾ ಘಟಕದ ವತಿಯಿಂದ ಜನತಂತ್ರದ ಸವಾಲು ಮತ್ತು ಪರಿಹಾರ ವಿಷಯ ಕುರಿತ ವಿಚಾರ ಸಂಕಿರಣದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. </p>.<p>‘ದಲಿತ ಸಂಘಟನೆಗಳಿಗೆ ಹೋರಾಟದ ಸರಿಯಾದ ದಿಕ್ಕು ತೋರಿಸಿದ ಬಿ.ಕೃಷ್ಣಪ್ಪ ಅವರ ಚಿಂತನೆಗಳು, ಹೋರಾಟದ ಮಾದರಿ ಪ್ರಸ್ತುತ ಕಾಲಘಟ್ಟದಲ್ಲೂ ಅಗತ್ಯವಿದೆ. ಅವರ ತತ್ವ ಮತ್ತು ಆದರ್ಶಗಳನ್ನು ಹೋರಾಟಗಾರರು ಉಳಿಸಿಕೊಳ್ಳಬೇಕಿದೆ’ ಎಂದರು. </p>.<p>‘ಜನತಂತ್ರವನ್ನು ಸರಿದಾರಿಗೆ ತರಲು ಆಮಿಷಗಳಿಗೆ ಒಳಗಾಗದೆ ತಮ್ಮ ಮತಗಳಿಗೆ ಮೌಲ್ಯವನ್ನು ತಂದುಕೊಂಡಾಗ ನಿಸ್ಸಂದೇಹವಾಗಿ ಜನತಂತ್ರವನ್ನು ಉಳಿಸುವ ಕಾರ್ಯವಾಗುತ್ತದೆ’ ಎಂದು ಮಹೇಶ್ ಹೇಳಿದರು. </p>.<p>ನಿರ್ಣಯ ಮತ್ತು ಕ್ರಿಯಾ ಯೋಜನೆಗಳನ್ನು ಮಂಡಿಸಿದ ಹಿರೇಹಳ್ಳಿ ಮಲ್ಲಿಕಾರ್ಜುನ್, ‘ಸಂವಿಧಾನವೇ ಪ್ರಜಾಸತ್ತೆಗೆ ಜೀವಾಳವಾಗಿದೆ. ಬಂಡವಾಳಶಾಹಿಗಳು, ಕೋಮುವಾದಿಗಳು ವ್ಯವಸ್ಥೆಯನ್ನು ಆಪೋಷನ ತೆಗೆದುಕೊಳ್ಳುತ್ತಿರುವ ಕಾಲಘಟ್ಟದಲ್ಲಿ ಹಿಂದುಳಿದ, ದಲಿತ ಮತ್ತು ಮಹಿಳಾ ವರ್ಗಗಳಿಗೆ ಜನತಂತ್ರದ ಬಗ್ಗೆ ಜಾಗೃತಿಯನ್ನು ಮೂಡಿಸಬೇಕಿದೆ’ ಎಂದರು. </p>.<p>‘ಅನಕ್ಷರಸ್ಥರಿಗಿಂತ ಅಕ್ಷರಸ್ಥರ ಮತಗಳು ಹಣಕ್ಕಾಗಿ ಬಿಕರಿಯಾಗುತ್ತಿರುವ ಈ ಕಾಲದಲ್ಲಿ ಸೋಲು ಗೆಲುವುಗಳಾಚೆ ಒಂದು ಮೇಲ್ಪಂಕ್ತಿಯ ಮಾದರಿಯನ್ನು ರೂಪಿಸಿಕೊಡುವ ಜವಾಬ್ದಾರಿ ಅಂಬೇಡ್ಕರ್ ಅನುಯಾಯಿಗಳ ಹೆಗಲ ಮೇಲಿದೆ’ ಎಂದು ಅಭಿಪ್ರಾಯಪಟ್ಟರು. </p>.<p>ಟಿ. ಶಂಕರ್, ಕೆ.ರುದ್ರಪ್ಪ, ಟಿ. ರಾಮು, ಬಾಲೇನಹಳ್ಳಿ ರಾಮಣ್ಣ, ರುದ್ರಮುನಿ, ಹುಚ್ಚವ್ವನಹಳ್ಳಿ ವೆಂಕಟೇಶ್, ತಿಪ್ಪೇಸ್ವಾಮಿ ಗೊಲ್ಲಹಳ್ಳಿ, ಎಸ್. ಜಿ. ರಂಗಸ್ವಾಮಿ ಸಕ್ಕರ, ಶಿವಣ್ಣ ರಂಗೇನಹಳ್ಳಿ, ಆರ್. ಶಿವಶಂಕರ್, ಮಂಜುನಾಥ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿರಿಯೂರು:</strong> ರಾಜ್ಯದಲ್ಲಿ ದಲಿತರ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ ತರ್ಕಬದ್ಧ ಹೋರಾಟ ನಡೆಸುವ ಮೂಲಕ ಆಳುವವರನ್ನು ಎಚ್ಚರಿಸಿದ, ದಲಿತರಿಗೆ ದನಿಯಾದ ಕೀರ್ತಿ ಪ್ರೊ.ಬಿ.ಕೃಷ್ಣಪ್ಪ ಅವರಿಗೆ ಸಲ್ಲುತ್ತದೆ ಎಂದು ಜನತಂತ್ರ ಉಳಿಸಿ ಆಂದೋಲನದ ರಾಜ್ಯ ಘಟಕದ ಸಂಚಾಲಕ ಪ್ರೊ.ಸಿ. ಕೆ. ಮಹೇಶ್ ಹೇಳಿದರು. </p>.<p>ನಗರದ ನೆಹರು ಮೈದಾನದಲ್ಲಿರುವ ರೋಟರಿ ಸಭಾಂಗಣದಲ್ಲಿ ಜನತಂತ್ರ ಉಳಿಸಿ ಆಂದೋಲನ– ಕರ್ನಾಟಕದ ಜಿಲ್ಲಾ ಘಟಕದ ವತಿಯಿಂದ ಜನತಂತ್ರದ ಸವಾಲು ಮತ್ತು ಪರಿಹಾರ ವಿಷಯ ಕುರಿತ ವಿಚಾರ ಸಂಕಿರಣದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. </p>.<p>‘ದಲಿತ ಸಂಘಟನೆಗಳಿಗೆ ಹೋರಾಟದ ಸರಿಯಾದ ದಿಕ್ಕು ತೋರಿಸಿದ ಬಿ.ಕೃಷ್ಣಪ್ಪ ಅವರ ಚಿಂತನೆಗಳು, ಹೋರಾಟದ ಮಾದರಿ ಪ್ರಸ್ತುತ ಕಾಲಘಟ್ಟದಲ್ಲೂ ಅಗತ್ಯವಿದೆ. ಅವರ ತತ್ವ ಮತ್ತು ಆದರ್ಶಗಳನ್ನು ಹೋರಾಟಗಾರರು ಉಳಿಸಿಕೊಳ್ಳಬೇಕಿದೆ’ ಎಂದರು. </p>.<p>‘ಜನತಂತ್ರವನ್ನು ಸರಿದಾರಿಗೆ ತರಲು ಆಮಿಷಗಳಿಗೆ ಒಳಗಾಗದೆ ತಮ್ಮ ಮತಗಳಿಗೆ ಮೌಲ್ಯವನ್ನು ತಂದುಕೊಂಡಾಗ ನಿಸ್ಸಂದೇಹವಾಗಿ ಜನತಂತ್ರವನ್ನು ಉಳಿಸುವ ಕಾರ್ಯವಾಗುತ್ತದೆ’ ಎಂದು ಮಹೇಶ್ ಹೇಳಿದರು. </p>.<p>ನಿರ್ಣಯ ಮತ್ತು ಕ್ರಿಯಾ ಯೋಜನೆಗಳನ್ನು ಮಂಡಿಸಿದ ಹಿರೇಹಳ್ಳಿ ಮಲ್ಲಿಕಾರ್ಜುನ್, ‘ಸಂವಿಧಾನವೇ ಪ್ರಜಾಸತ್ತೆಗೆ ಜೀವಾಳವಾಗಿದೆ. ಬಂಡವಾಳಶಾಹಿಗಳು, ಕೋಮುವಾದಿಗಳು ವ್ಯವಸ್ಥೆಯನ್ನು ಆಪೋಷನ ತೆಗೆದುಕೊಳ್ಳುತ್ತಿರುವ ಕಾಲಘಟ್ಟದಲ್ಲಿ ಹಿಂದುಳಿದ, ದಲಿತ ಮತ್ತು ಮಹಿಳಾ ವರ್ಗಗಳಿಗೆ ಜನತಂತ್ರದ ಬಗ್ಗೆ ಜಾಗೃತಿಯನ್ನು ಮೂಡಿಸಬೇಕಿದೆ’ ಎಂದರು. </p>.<p>‘ಅನಕ್ಷರಸ್ಥರಿಗಿಂತ ಅಕ್ಷರಸ್ಥರ ಮತಗಳು ಹಣಕ್ಕಾಗಿ ಬಿಕರಿಯಾಗುತ್ತಿರುವ ಈ ಕಾಲದಲ್ಲಿ ಸೋಲು ಗೆಲುವುಗಳಾಚೆ ಒಂದು ಮೇಲ್ಪಂಕ್ತಿಯ ಮಾದರಿಯನ್ನು ರೂಪಿಸಿಕೊಡುವ ಜವಾಬ್ದಾರಿ ಅಂಬೇಡ್ಕರ್ ಅನುಯಾಯಿಗಳ ಹೆಗಲ ಮೇಲಿದೆ’ ಎಂದು ಅಭಿಪ್ರಾಯಪಟ್ಟರು. </p>.<p>ಟಿ. ಶಂಕರ್, ಕೆ.ರುದ್ರಪ್ಪ, ಟಿ. ರಾಮು, ಬಾಲೇನಹಳ್ಳಿ ರಾಮಣ್ಣ, ರುದ್ರಮುನಿ, ಹುಚ್ಚವ್ವನಹಳ್ಳಿ ವೆಂಕಟೇಶ್, ತಿಪ್ಪೇಸ್ವಾಮಿ ಗೊಲ್ಲಹಳ್ಳಿ, ಎಸ್. ಜಿ. ರಂಗಸ್ವಾಮಿ ಸಕ್ಕರ, ಶಿವಣ್ಣ ರಂಗೇನಹಳ್ಳಿ, ಆರ್. ಶಿವಶಂಕರ್, ಮಂಜುನಾಥ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>