<p><strong>ಸಿರಿಗೆರೆ:</strong> ‘ಸಾಧನೆಯ ದಾರಿಯಲ್ಲಿ ಸಾಗಿದ ಸಾಮಾನ್ಯರೂ ಅಸಮಾನ್ಯರಾಗಿದ್ದಾರೆ. ಶ್ರದ್ಧೆಯಿಂದ ಆ ದಾರಿಯಲ್ಲಿ ಸಾಗಿದರೆ ನಿಮಗೂ ಯಶಸ್ಸು ಲಭ್ಯವಾಗುತ್ತದೆ’ ಎಂದು ಚಿತ್ರದುರ್ಗದ ಶಾರದಾ ರಾಮಕೃಷ್ಣ ಆಶ್ರಮದ ಬ್ರಹ್ಮನಿಷ್ಠಾನಂದ ಸ್ವಾಮೀಜಿ ಹೇಳಿದರು.</p>.<p>ಇಲ್ಲಿನ ಎಂ. ಬಸವಯ್ಯ ವಸತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.</p>.<p>‘ವಿದ್ಯಾರ್ಥಿಗಳು ಶಿಕ್ಷಣದ ಧ್ಯಾನ ಮಾಡಬೇಕು. ಆಧ್ಯಾತ್ಮಿಕ ಧ್ಯಾನದ ಸಂದರ್ಭದಲ್ಲಿ ಕಣ್ಣು ಮುಚ್ಚುತ್ತೇವೆ. ಶಿಕ್ಷಣದ ವಿಚಾರಕ್ಕೆ ಬಂದಾಗ ನಮ್ಮ ಕಣ್ಣುಗಳು ತೆರೆದಿರಬೇಕು. ವಿದ್ಯಾರ್ಥಿಗಳು ಸುಸಂಸ್ಕೃತರಾಗಬೇಕು. ತಂದೆ-ತಾಯಿ, ಅನ್ನ ಕೊಡುವ ರೈತ, ದೇಶ ಕಾಯುವ ಯೋಧರ ಬಗ್ಗೆ ಗೌರವ ಭಾವನೆ ತಾಳಬೇಕು. ಎಲ್ಲರೂ ಮೊಬೈಲ್ ಫೋನ್ಗಳಿಂದ ಆದಷ್ಟೂ ದೂರ ಇರಬೇಕು’ ಎಂದು ಸ್ವಾಮೀಜಿ ಕಿವಿಮಾತು ಹೇಳಿದರು.</p>.<p>‘ಅಸಾಧ್ಯ ಎಂಬ ಪದವೇ ವಿದ್ಯಾರ್ಥಿಗಳ ಬಳಿ ಸುಳಿದಾಡಬಾರದು. ನಾನು ಸಾಧಿಸಬಲ್ಲೆ ಎಂಬ ಅಪರಿಮಿತ ವಿಶ್ವಾಸ ಬೆಳೆಯಬೇಕು’ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ. ಡಿ.ಎಂ. ನಾಗರಾಜ್ ಹೇಳಿದರು. </p>.<p>ಬಿಎಲ್ಆರ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಶಿವನಗೌಡ ಸುರಕೋಡ, ನಿವೃತ್ತ ಪ್ರಾಚಾರ್ಯರಾದ ಬಿ.ಎಸ್. ಕಲ್ಪನಾ, ಕಾಲೇಜಿನ ಪ್ರಾಚಾರ್ಯ ಪ್ರವೀಣ್ ಕುಮಾರ್ ಮಾತನಾಡಿದರು. </p>.<p>ಡಿ.ಎಂ. ನಾಗರಾಜ್ ಕುಟುಂಬದ ವತಿಯಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ 46 ವಿದ್ಯಾರ್ಥಿಗಳಿಗೆ ಪದಕ, ಸ್ಮರಣಿಕೆ, ನಗದು ಬಹುಮಾನ ನೀಡಿ ಸತ್ಕರಿಸಲಾಯಿತು. ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಕನ್ನಡ-ಇಂಗ್ಲಿಷ್ ಶಬ್ದಕೋಶವನ್ನು ಉಡುಗೊರೆ ನೀಡಲಾಯಿತು. ಕಾಲೇಜಿನ ಕನ್ನಡ ಉಪನ್ಯಾಸಕಿ ರಮಾ ಅವರನ್ನು ಗೌರವಿಸಲಾಯಿತು.</p>.<p>ಅಧ್ಯಾಪಕ ಕಾರ್ಯದರ್ಶಿ ಬಿ. ಪ್ರಕಾಶ್, ಉಪನ್ಯಾಸಕ ರವಿ, ರಂಜಿತಾ ಮುಂತಾದವರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿರಿಗೆರೆ:</strong> ‘ಸಾಧನೆಯ ದಾರಿಯಲ್ಲಿ ಸಾಗಿದ ಸಾಮಾನ್ಯರೂ ಅಸಮಾನ್ಯರಾಗಿದ್ದಾರೆ. ಶ್ರದ್ಧೆಯಿಂದ ಆ ದಾರಿಯಲ್ಲಿ ಸಾಗಿದರೆ ನಿಮಗೂ ಯಶಸ್ಸು ಲಭ್ಯವಾಗುತ್ತದೆ’ ಎಂದು ಚಿತ್ರದುರ್ಗದ ಶಾರದಾ ರಾಮಕೃಷ್ಣ ಆಶ್ರಮದ ಬ್ರಹ್ಮನಿಷ್ಠಾನಂದ ಸ್ವಾಮೀಜಿ ಹೇಳಿದರು.</p>.<p>ಇಲ್ಲಿನ ಎಂ. ಬಸವಯ್ಯ ವಸತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.</p>.<p>‘ವಿದ್ಯಾರ್ಥಿಗಳು ಶಿಕ್ಷಣದ ಧ್ಯಾನ ಮಾಡಬೇಕು. ಆಧ್ಯಾತ್ಮಿಕ ಧ್ಯಾನದ ಸಂದರ್ಭದಲ್ಲಿ ಕಣ್ಣು ಮುಚ್ಚುತ್ತೇವೆ. ಶಿಕ್ಷಣದ ವಿಚಾರಕ್ಕೆ ಬಂದಾಗ ನಮ್ಮ ಕಣ್ಣುಗಳು ತೆರೆದಿರಬೇಕು. ವಿದ್ಯಾರ್ಥಿಗಳು ಸುಸಂಸ್ಕೃತರಾಗಬೇಕು. ತಂದೆ-ತಾಯಿ, ಅನ್ನ ಕೊಡುವ ರೈತ, ದೇಶ ಕಾಯುವ ಯೋಧರ ಬಗ್ಗೆ ಗೌರವ ಭಾವನೆ ತಾಳಬೇಕು. ಎಲ್ಲರೂ ಮೊಬೈಲ್ ಫೋನ್ಗಳಿಂದ ಆದಷ್ಟೂ ದೂರ ಇರಬೇಕು’ ಎಂದು ಸ್ವಾಮೀಜಿ ಕಿವಿಮಾತು ಹೇಳಿದರು.</p>.<p>‘ಅಸಾಧ್ಯ ಎಂಬ ಪದವೇ ವಿದ್ಯಾರ್ಥಿಗಳ ಬಳಿ ಸುಳಿದಾಡಬಾರದು. ನಾನು ಸಾಧಿಸಬಲ್ಲೆ ಎಂಬ ಅಪರಿಮಿತ ವಿಶ್ವಾಸ ಬೆಳೆಯಬೇಕು’ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ. ಡಿ.ಎಂ. ನಾಗರಾಜ್ ಹೇಳಿದರು. </p>.<p>ಬಿಎಲ್ಆರ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಶಿವನಗೌಡ ಸುರಕೋಡ, ನಿವೃತ್ತ ಪ್ರಾಚಾರ್ಯರಾದ ಬಿ.ಎಸ್. ಕಲ್ಪನಾ, ಕಾಲೇಜಿನ ಪ್ರಾಚಾರ್ಯ ಪ್ರವೀಣ್ ಕುಮಾರ್ ಮಾತನಾಡಿದರು. </p>.<p>ಡಿ.ಎಂ. ನಾಗರಾಜ್ ಕುಟುಂಬದ ವತಿಯಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ 46 ವಿದ್ಯಾರ್ಥಿಗಳಿಗೆ ಪದಕ, ಸ್ಮರಣಿಕೆ, ನಗದು ಬಹುಮಾನ ನೀಡಿ ಸತ್ಕರಿಸಲಾಯಿತು. ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಕನ್ನಡ-ಇಂಗ್ಲಿಷ್ ಶಬ್ದಕೋಶವನ್ನು ಉಡುಗೊರೆ ನೀಡಲಾಯಿತು. ಕಾಲೇಜಿನ ಕನ್ನಡ ಉಪನ್ಯಾಸಕಿ ರಮಾ ಅವರನ್ನು ಗೌರವಿಸಲಾಯಿತು.</p>.<p>ಅಧ್ಯಾಪಕ ಕಾರ್ಯದರ್ಶಿ ಬಿ. ಪ್ರಕಾಶ್, ಉಪನ್ಯಾಸಕ ರವಿ, ರಂಜಿತಾ ಮುಂತಾದವರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>