<p><strong>ಚಳ್ಳಕೆರೆ</strong>: ಮೂರು ತಿಂಗಳ ಹಿಂದೆ ತಳಕು ಹೋಬಳಿ ವ್ಯಾಪ್ತಿಯ ಹಿರೇಹಳ್ಳಿ ಗ್ರಾಮದ ಹೊರ ವಲಯದ ಮನೆಯೊಂದರಲ್ಲಿ ನಡೆದಿದ್ದ ಕಳವು ಪ್ರಕರಣವನ್ನು ಭೇದಿಸಿರುವ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.</p>.<p>ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ರುದ್ರಂಪೇಟೆಯ ನೀಲಂ ಶ್ರೀರಾಮ್ ವಿಜಯ್ ಹಾಗೂ ವಿಜಯವಾಡದ ರಂಗುಲಪ್ರಸಾದ್ ಬಂಧಿತರು. ಕಳವು ಪ್ರಕರಣದ ನೇತೃತ್ವವಹಿಸಿದ್ದ ಪಾಲವೆಂಕಟೇಶ್ ರಾವ್ ತಲೆಮರೆಸಿಕೊಂಡಿದ್ದಾನೆ.</p>.<p>ಹಿರೇಹಳ್ಳಿ ಗ್ರಾಮದ ಹೊರ ವಲಯದ ಮನೆಯೊಂದರಲ್ಲಿ ಜೂನ್ 9ರದು ಮನೆ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಚಾಕು ತೋರಿಸಿ ಮಾಲೀಕಕನನ್ನು ಹಗ್ಗದಿಂದ ಕಟ್ಟಿ ಹಾಕಿ ₹ 6.52 ಲಕ್ಷ ರೂ ಮೌಲ್ಯದ /// ಹೆಣ್ಣುಮಗಳ ಮೈಮೇಲಿನ ಆಭರಣ ದೋಚಿ ಪರಾರಿಯಾಗಿದ್ದರು.</p>.<p>ಈ ಬಗ್ಗೆ ತಳಕು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದು, ಅವರ ಬಳಿ ಇದ್ದ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.</p>.<p>ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ಕುಮಾರ್ ಬಂಡಾರು ಅವರ ಮಾರ್ಗದರ್ಶನದಲ್ಲಿ ಅಧೀಕ್ಷಕ ಕುಮಾರಸ್ವಾಮಿ, ಡಿವೈಎಸ್ಪಿ ಟಿ.ಬಿ.ರಾಜಣ್ಣ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. ತಳಕು ಠಾಣೆ ಪಿಎಸ್ಐ ಲೋಕೇಶ್, ಶಿವಕುಮಾರ್ ಕಾರ್ಯಾಚರಣೆಯಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಳ್ಳಕೆರೆ</strong>: ಮೂರು ತಿಂಗಳ ಹಿಂದೆ ತಳಕು ಹೋಬಳಿ ವ್ಯಾಪ್ತಿಯ ಹಿರೇಹಳ್ಳಿ ಗ್ರಾಮದ ಹೊರ ವಲಯದ ಮನೆಯೊಂದರಲ್ಲಿ ನಡೆದಿದ್ದ ಕಳವು ಪ್ರಕರಣವನ್ನು ಭೇದಿಸಿರುವ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.</p>.<p>ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ರುದ್ರಂಪೇಟೆಯ ನೀಲಂ ಶ್ರೀರಾಮ್ ವಿಜಯ್ ಹಾಗೂ ವಿಜಯವಾಡದ ರಂಗುಲಪ್ರಸಾದ್ ಬಂಧಿತರು. ಕಳವು ಪ್ರಕರಣದ ನೇತೃತ್ವವಹಿಸಿದ್ದ ಪಾಲವೆಂಕಟೇಶ್ ರಾವ್ ತಲೆಮರೆಸಿಕೊಂಡಿದ್ದಾನೆ.</p>.<p>ಹಿರೇಹಳ್ಳಿ ಗ್ರಾಮದ ಹೊರ ವಲಯದ ಮನೆಯೊಂದರಲ್ಲಿ ಜೂನ್ 9ರದು ಮನೆ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಚಾಕು ತೋರಿಸಿ ಮಾಲೀಕಕನನ್ನು ಹಗ್ಗದಿಂದ ಕಟ್ಟಿ ಹಾಕಿ ₹ 6.52 ಲಕ್ಷ ರೂ ಮೌಲ್ಯದ /// ಹೆಣ್ಣುಮಗಳ ಮೈಮೇಲಿನ ಆಭರಣ ದೋಚಿ ಪರಾರಿಯಾಗಿದ್ದರು.</p>.<p>ಈ ಬಗ್ಗೆ ತಳಕು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದು, ಅವರ ಬಳಿ ಇದ್ದ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.</p>.<p>ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ಕುಮಾರ್ ಬಂಡಾರು ಅವರ ಮಾರ್ಗದರ್ಶನದಲ್ಲಿ ಅಧೀಕ್ಷಕ ಕುಮಾರಸ್ವಾಮಿ, ಡಿವೈಎಸ್ಪಿ ಟಿ.ಬಿ.ರಾಜಣ್ಣ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. ತಳಕು ಠಾಣೆ ಪಿಎಸ್ಐ ಲೋಕೇಶ್, ಶಿವಕುಮಾರ್ ಕಾರ್ಯಾಚರಣೆಯಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>