‘ಉರಿಲಿಂಗ ಪೆದ್ದಿಯ ಮೂಲ ಹೆಸರು ಪೆದ್ದಣ್ಣ. ಆಂಧ್ರಪ್ರದೇಶದಿಂದ ಬಂದವರು. ಕಳ್ಳತನವೇ ಅವರ ಕೆಲಸವಾಗಿತ್ತು. ಈತನ ಪತ್ನಿ ಕಾಳವ್ವೆ. ವಚನಾಂಕಿತ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. ಇವರ 363 ವಚನಗಳು ಲಭ್ಯವಿದೆ. ಒಮ್ಮೆ ಕಳ್ಳತನಕ್ಕೆ ಹೋದಾಗ ಅಲ್ಲಿ ಉರಿಲಿಂಗದೇವರು ಲಿಂಗದೀಕ್ಷೆಯನ್ನು ನೀಡುತ್ತಾ ಶರಣನಾದವನ ಗುಣಲಕ್ಷಣಗಳ ಬಗ್ಗೆ ಹೇಳುವುದನ್ನು ಕೇಳಿ, ನೋಡಿ ಮನಸ್ಸು ಪರಿವರ್ತನೆಯಾಗುತ್ತದೆ. ಶರಣನಾಗಿ ಕಟ್ಟಿಗೆ ಕಡಿದು ಮಾರುವ ಕಾಯಕ ಕೈಗೊಳ್ಳುತ್ತಾರೆ. ಇವನ ಕಾಯಕ ಶ್ರದ್ಧೆ, ನಿಷ್ಠೆಯನ್ನು ಗಮನಿಸಿದ ಉರಿಲಿಂಗದೇವರು ಲಿಂಗದೀಕ್ಷೆ ನೀಡುವರು. ಮುಂದೆ ತಮ್ಮ ಮಠಕ್ಕೆ ಉರಿಲಿಂಗ ಪೆದ್ದಿಗಳ ಹೆಸರಿನಲ್ಲಿ ಪೀಠಾಧಿಪತಿಗಳಾಗುತ್ತಾರೆ. ಹೀಗೆ ಒಬ್ಬ ಕಳ್ಳ ಶರಣನಾಗಿ, ಜ್ಞಾನಿಯಾಗಿ, ವಚನಕಾರನಾಗಿ, ಗುರುವಾದದ್ದು ಜಗತ್ತಿನಲ್ಲಿ ಎಂದೂ ಕೇಳರಿಯದ ಸಂಗತಿ’ ಎಂದು ವಿವರಿಸಿದರು.