ತಮಟೆ, ಪಟಕುಣಿತ, ಗಾರುಡಿ ಗೊಂಬೆ, ಖಾಸಬೇಡರ ಪಡೆ ಸೇರಿ ಹಲವು ಕಲಾತಂಡಗಳು ಪಾದಯಾತ್ರೆಯ ಮೆರುಗು ಹೆಚ್ಚಿಸಿವೆ. ಮಾರ್ಗದ ಎರಡೂ ಬದಿಯಲ್ಲಿ ನಿಂತಿರುವ ಜನರು ಪಾದಯಾತ್ರೆ ಕಣ್ತುಂಬಿಕೊಂಡರು. ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ ಅವರು ಜನರತ್ತ ಕೈಬೀಸಿ ಹರ್ಷ ವ್ಯಕ್ತಪಡಿಸಿದರು. ನೆಹರೂ ವೃತ್ತದಲ್ಲಿರುವ ನೆಹರೂ ಪ್ರತಿಮೆಗೆ ರಾಹುಲ್ ನಮನ ಸಲ್ಲಿಸಿದರು.