<p><strong>ಚಿಕ್ಕಜಾಜೂರು</strong>: ಅಡಿಕೆ ವ್ಯಾಪಾರಿಯೊಬ್ಬ ಇಲ್ಲಿನ ಇಬ್ಬರು ರೈತರಿಂದ ₹22.54 ಲಕ್ಷ ಮೌಲ್ಯದ ಅಡಿಕೆಯನ್ನು ಖರೀದಿಸಿ, ವಂಚಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.</p>.<p>ಚಿಕ್ಕಜಾಜೂರು ಸಮೀಪದ ಹೊಸಹಳ್ಳಿ ಗ್ರಾಮದ ನಿಂಗರಾಜ್ ಹಾಗೂ ಶ್ರೀಕಾಂತ್ ಎಂಬವರು ವಂಚನೆಗೊಳಗಾದ ರೈತರು.</p>.<p>ಚನ್ನಗಿರಿ ತಾಲ್ಲೂಕಿನ ಗೊಪ್ಪೆನಾಳ್ ಗ್ರಾಮದ ರುದ್ರೇಶ್ ಎಂಬವರಿಗೆ ಏಪ್ರಿಲ್ ತಿಂಗಳಿನಲ್ಲಿ ಇವರು ₹13,24 ಲಕ್ಷ ಹಾಗೂ ₹ 9.30 ಲಕ್ಷ ಮೌಲ್ಯದ ಅಡಿಕೆಯನ್ನು ಮಾರಾಟ ಮಾಡಿದ್ದರು. ವಾರದೊಳಗೆ ಹಣ ಕೊಡುವುದಾಗಿ ತಿಳಿಸಿದ್ದ ರುದ್ರೇಶ್, ಅಡಿಕೆ ಖರೀದಿಸಿದ್ದರು. ಆದರೆ, ತಿಂಗಳಾದರೂ ಹಣವನ್ನು ಕೊಡದಿದ್ದಾಗ ಚನ್ನಗಿರಿಯ ಸಿಪಿಐ ಅವರಿಗೆ ದೂರು ನೀಡಿದ್ದರು.</p>.<p>ರುದ್ರೇಶ್ ಹಾಗೂ ಅವರ ತಾಯಿ ಸಿಪಿಐ ಸಮ್ಮುಖದಲ್ಲಿ ಮೂರು ತಿಂಗಳ ವಾಯಿದೆ ಪಡೆದಿದ್ದರು. ನಂತರ ರುದ್ರೇಶ್ ನಾಪತ್ತೆಯಾಗಿದ್ದಾಗಿ ತಿಳಿದುಬಂದಿದೆ.</p>.<p>‘ಮನೆಯ ಹತ್ತಿರ ಹೋದರೆ ನಮ್ಮ ವಿರುದ್ಧವೇ ಪ್ರಕರಣ ದಾಖಲಿಸುವುದಾಗಿ ಅವರ ತಾಯಿ ಬೆದರಿಕೆ ಹಾಕುತ್ತಿದ್ದಾರೆ. ನಾವು ಸಾಲ ಮಾಡಿ, ಅಡಿಕೆ ಬೆಳೆದು ಮಾರಾಟ ಮಾಡಿದರೆ, ಖರೀದಿದಾರ ತಲೆಮರೆಸಿಕೊಂಡಿದ್ದಾನೆ’ ಎಂದು ನಿಂಗರಾಜ್ ಹಾಗೂ ಶ್ರೀಕಾಂತ್ ತಿಳಿಸಿದ್ದಾರೆ. </p>.<p>ಚಿಕ್ಕಜಾಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಜಾಜೂರು</strong>: ಅಡಿಕೆ ವ್ಯಾಪಾರಿಯೊಬ್ಬ ಇಲ್ಲಿನ ಇಬ್ಬರು ರೈತರಿಂದ ₹22.54 ಲಕ್ಷ ಮೌಲ್ಯದ ಅಡಿಕೆಯನ್ನು ಖರೀದಿಸಿ, ವಂಚಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.</p>.<p>ಚಿಕ್ಕಜಾಜೂರು ಸಮೀಪದ ಹೊಸಹಳ್ಳಿ ಗ್ರಾಮದ ನಿಂಗರಾಜ್ ಹಾಗೂ ಶ್ರೀಕಾಂತ್ ಎಂಬವರು ವಂಚನೆಗೊಳಗಾದ ರೈತರು.</p>.<p>ಚನ್ನಗಿರಿ ತಾಲ್ಲೂಕಿನ ಗೊಪ್ಪೆನಾಳ್ ಗ್ರಾಮದ ರುದ್ರೇಶ್ ಎಂಬವರಿಗೆ ಏಪ್ರಿಲ್ ತಿಂಗಳಿನಲ್ಲಿ ಇವರು ₹13,24 ಲಕ್ಷ ಹಾಗೂ ₹ 9.30 ಲಕ್ಷ ಮೌಲ್ಯದ ಅಡಿಕೆಯನ್ನು ಮಾರಾಟ ಮಾಡಿದ್ದರು. ವಾರದೊಳಗೆ ಹಣ ಕೊಡುವುದಾಗಿ ತಿಳಿಸಿದ್ದ ರುದ್ರೇಶ್, ಅಡಿಕೆ ಖರೀದಿಸಿದ್ದರು. ಆದರೆ, ತಿಂಗಳಾದರೂ ಹಣವನ್ನು ಕೊಡದಿದ್ದಾಗ ಚನ್ನಗಿರಿಯ ಸಿಪಿಐ ಅವರಿಗೆ ದೂರು ನೀಡಿದ್ದರು.</p>.<p>ರುದ್ರೇಶ್ ಹಾಗೂ ಅವರ ತಾಯಿ ಸಿಪಿಐ ಸಮ್ಮುಖದಲ್ಲಿ ಮೂರು ತಿಂಗಳ ವಾಯಿದೆ ಪಡೆದಿದ್ದರು. ನಂತರ ರುದ್ರೇಶ್ ನಾಪತ್ತೆಯಾಗಿದ್ದಾಗಿ ತಿಳಿದುಬಂದಿದೆ.</p>.<p>‘ಮನೆಯ ಹತ್ತಿರ ಹೋದರೆ ನಮ್ಮ ವಿರುದ್ಧವೇ ಪ್ರಕರಣ ದಾಖಲಿಸುವುದಾಗಿ ಅವರ ತಾಯಿ ಬೆದರಿಕೆ ಹಾಕುತ್ತಿದ್ದಾರೆ. ನಾವು ಸಾಲ ಮಾಡಿ, ಅಡಿಕೆ ಬೆಳೆದು ಮಾರಾಟ ಮಾಡಿದರೆ, ಖರೀದಿದಾರ ತಲೆಮರೆಸಿಕೊಂಡಿದ್ದಾನೆ’ ಎಂದು ನಿಂಗರಾಜ್ ಹಾಗೂ ಶ್ರೀಕಾಂತ್ ತಿಳಿಸಿದ್ದಾರೆ. </p>.<p>ಚಿಕ್ಕಜಾಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>