ಕೊಳವೆಬಾವಿ ಲಾರಿಯಲ್ಲಿ ಕೆಲಸ ಮಾಡುತ್ತಿದ್ದ ಅವರು, ಕೆರೆಯ ದಂಡೆಯ ಬಳಿಯ ಜಗಳೂರು ರಸ್ತೆಯಲ್ಲಿ 3 ದಿನಗಳಿಂದ ಕೆಟ್ಟು ನಿಂತಿದ್ದ ಬೋರ್ವೆಲ್ ಲಾರಿಯ ದುರಸ್ತಿ ನಡೆಯುತ್ತಿತ್ತು. ಹೀಗಾಗಿ ಎಂಟು ಜನ ಕಾರ್ಮಿಕರು ಈಜಲು ಕೆರೆಗೆ ಇಳಿದಿದ್ದರು.
ಆಗ ಕೆಂಚಲ್ ಬುಜ್ಜಾರೆಡ್ಡಿ ಈಜುತ್ತಿದ್ದಾಗ ಕಲ್ಲೊಂದು ತಲೆಗೆ ತಾಗಿ ಪೆಟ್ಟು ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಭರಮಸಾಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣ ದಾಖಲಾಗಿದೆ.