ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ತೋಪಿನ ಗೊಲ್ಲಹಳ್ಳಿಯಲ್ಲಿ ದೇವರ ಪ್ರಸಾದ ಮತ್ತು ದಕ್ಷಿಣೆ ಸ್ವೀಕಾರ ವಿಚಾರದಲ್ಲಿ ಗಲಾಟೆ ನಡೆದಿದ್ದು, ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ.
ದಾಸಯ್ಯ ಶೇಖರ್ (34) ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
ತೋಪಿನ ಗೊಲ್ಲಹಳ್ಳಿಯ ಗೊಲ್ಲಾಳಮ್ಮ ದೇಗುಲದ ಪ್ರಸಾದ ಮತ್ತು ದಕ್ಷಿಣೆ ವಿಚಾರದಲ್ಲಿ ಗಲಾಟೆ ಆರಂಭವಾಗಿದೆ. ಪೂಜಾರಿಗಳು ಮತ್ತು ದಾಸಯ್ಯರು ಪರಸ್ಪರ ಬಡಿದಾಡಿಕೊಂಡಿದ್ದಾರೆ. ದಾಸಯ್ಯರ ಮೇಲೆ ಪೂಜಾರಿಗಳು ಮಚ್ಚಿನಿಂದ ಹಲ್ಲೆ ನಡೆಸಿದರು ಎಂಬ ಆರೋಪ ಕೇಳಿಬಂದಿದೆ.