‘ಅಡುಗೆ ಮಾಡುವುದು ಒಂದು ಕಲೆ. ರುಚಿಕಟ್ಟಾದ ಅಡುಗೆ ತಯಾರಿಸುವಲ್ಲಿ ಪುರುಷರದ್ದೇ ಪಾರುಪತ್ಯ ಎಂಬುದು ನಳಮಹಾರಾಜ, ಭೀಮಸೇನರಿಂದ ತಿಳಿದು ಬಂದಿದೆ. ಈಚೆಗೆ ಸಿದ್ಧಪಡಿಸಿದ ಆಹಾರದತ್ತ ಒಲವು ತೋರುತ್ತಿರುವ ಯುವ ಪೀಳಿಗೆ ಅಡುಗೆ ಮನೆಯ ಸಂಪರ್ಕ ಕಳೆದುಕೊಳ್ಳುತ್ತಿದ್ದಾರೆ. ಆರೋಗ್ಯದ ದೃಷ್ಟಿಯಿಂದ ಸಿದ್ಧಪಡಿಸಿದ ಆಹಾರ ಸೇವನೆ ಅಪಾಯಕಾರಿ. ಕಷ್ಟ ಎನಿಸಿದರೂ ಮನೆಯಲ್ಲಿಯೇ ಶುಚಿ–ರುಚಿಯಾಗಿ ಅಡುಗೆ ತಯಾರಿಸಿ ತಿನ್ನುವ ಖುಷಿಯೇ ಬೇರೆ. ಹಿರಿಯರು ಕಿರಿಯರಿಗೆ ಅಡುಗೆ ತಯಾರಿ ಬಗ್ಗೆ ಹೇಳಿಕೊಡಬೇಕು’ ಎಂದು ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಎಚ್.ಎಸ್. ನಾಗರಾಜ ಗುಪ್ತ ಸಲಹೆ ನೀಡಿದರು.