ಹಿರಿಯೂರು: ನಿರಂತರ ಜ್ಯೋತಿಗೆ ಅಳವಡಿಸಿರುವ ಪರಿವರ್ತಕದಿಂದ ತೋಟದ ಮನೆಗೆ ಅನಧಿಕೃತವಾಗಿ ಪಡೆದುಕೊಂಡಿದ್ದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ ಲೈನ್ಮನ್ ಮೇಲೆ ಹಲ್ಲೆ ಸಂಬಂಧ ದೂರು ಐಮಂಗಲ ಠಾಣೆಯಲ್ಲಿ ಮಂಗಳವಾರ ದೂರು ದಾಖಲಾಗಿದೆ.
ಲೈನ್ಮನ್ ವಿಠ್ಠಲ್ ಸಿದ್ದರಾಮಪ್ಪ ಹಳಿಯಾಳ್ ನೀಡಿದ ದೂರು ಆಧರಿಸಿ ಭೂತಯ್ಯನಹಟ್ಟಿಯ ರಂಗಸ್ವಾಮಿ, ಯಲ್ಲಪ್ಪ ಹಾಗೂ ಬೆಳಗಟ್ಟ ಗ್ರಾಮದ ರಂಗಾಭೋವಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ವಿಠ್ಠಲ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.