<p><strong>ಚಿತ್ರದುರ್ಗ</strong>: ‘ಬಸವಾದಿ ಶಿವಶರಣರ ಗುಣಸ್ವಭಾವಗಳು ಹಾಗೂ ಅವರ ಘನ ವ್ಯಕ್ತಿತ್ವವು ಅಥಣಿ ಮುರುಘೇಂದ್ರ ಶಿವಯೋಗಿಗಳವರಲ್ಲಿ ಅಡಕವಾಗಿತ್ತು. ಆ ಶರಣರ ಇಡೀ ಬದುಕನ್ನು ಶಿವಯೋಗಿಗಳವರು ಅನುಸರಿಸಿ ನಡೆದವರಾಗಿದ್ದರು’ ಎಂದು ಎಸ್ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ತಿಳಿಸಿದರು.</p>.<p>ನಗರದ ಮರುಘಾ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಅಥಣಿ ಮುರುಘೇಂದ್ರ ಶಿವಯೋಗಿಗಳ190ನೇ ಜಯಂತಿಯಲ್ಲಿ ಮಾತನಾಡಿದ ಅವರು, ‘ಗುರು, ಜಗದ್ಗುರು ಆಗುವುದು ಬಹುಶಃ ಸುಲಭದ ಕೆಲಸ. ಆದರೆ ಶಿವಯೋಗಿಯಾಗುವುದು ಕಠಿಣದ ಹಾದಿ. ಅದು ತ್ಯಾಗದ ಸ್ಥಾನ. ಅಂತಹ ಸವಾಲನ್ನು ಎದುರಿಸಿ ಆ ಸ್ಥಾನ ಪಡೆದಿದ್ದರು’ ಎಂದರು.</p>.<p>‘ಪತ್ರಿ-ಪುಷ್ಪಗಳನ್ನು ಕೀಳಬಾರದು. ಅದಕ್ಕೂ ಜೀವವಿದೆ. ಆದ್ದರಿಂದ ಅವು ಬಿದ್ದಾಗ ತಂದು ಶಿವನ ಮುಡಿಗೇರಿಸುವುದು ಅಂದರೆ ಯಾರಿಗೂ ನೋವುಂಟು ಮಾಡಬಾರದೆಂಬ ಮಾನವೀಯ ಗುಣ ಅವರಲ್ಲಿತ್ತು’ ಎಂದು ಸ್ಮರಿಸಿದರು.</p>.<p>‘ಮುರುಘೇಂದ್ರ ಶಿವಯೋಗಿಗಳ ಚಾರಿತ್ರ್ಯವನ್ನು ಶಬ್ದಗಳಲ್ಲಿ ಹಿಡಿದಿಡುವುದು ಕಷ್ಟದ ಕೆಲಸ. ಅಂತಹ ಶಿವಯೋಗ ಸಾಧನೆಯ ಮೂಲಕ ಎತ್ತರಕ್ಕೆ ಹೋಗಿದ್ದರು’ ಎಂದು ಬಸವ ಮುರುಘೇಂದ್ರ ಸ್ವಾಮೀಜಿ ತಿಳಿಸಿದರು.</p>.<p>ಎಸ್ಜೆಎಂ ಫಾರ್ಮಸಿ ಕಾಲೇಜು ಪ್ರಾಂಶುಪಾಲ ನಾಗರಾಜ್, ಶಿಕ್ಷಕರಾದ ಕೊಟ್ರಮ್ಮ ಗಡ್ಡೆಪ್ಪನವರ್, ಗಿರೀಶಾಚಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ</strong>: ‘ಬಸವಾದಿ ಶಿವಶರಣರ ಗುಣಸ್ವಭಾವಗಳು ಹಾಗೂ ಅವರ ಘನ ವ್ಯಕ್ತಿತ್ವವು ಅಥಣಿ ಮುರುಘೇಂದ್ರ ಶಿವಯೋಗಿಗಳವರಲ್ಲಿ ಅಡಕವಾಗಿತ್ತು. ಆ ಶರಣರ ಇಡೀ ಬದುಕನ್ನು ಶಿವಯೋಗಿಗಳವರು ಅನುಸರಿಸಿ ನಡೆದವರಾಗಿದ್ದರು’ ಎಂದು ಎಸ್ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ತಿಳಿಸಿದರು.</p>.<p>ನಗರದ ಮರುಘಾ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಅಥಣಿ ಮುರುಘೇಂದ್ರ ಶಿವಯೋಗಿಗಳ190ನೇ ಜಯಂತಿಯಲ್ಲಿ ಮಾತನಾಡಿದ ಅವರು, ‘ಗುರು, ಜಗದ್ಗುರು ಆಗುವುದು ಬಹುಶಃ ಸುಲಭದ ಕೆಲಸ. ಆದರೆ ಶಿವಯೋಗಿಯಾಗುವುದು ಕಠಿಣದ ಹಾದಿ. ಅದು ತ್ಯಾಗದ ಸ್ಥಾನ. ಅಂತಹ ಸವಾಲನ್ನು ಎದುರಿಸಿ ಆ ಸ್ಥಾನ ಪಡೆದಿದ್ದರು’ ಎಂದರು.</p>.<p>‘ಪತ್ರಿ-ಪುಷ್ಪಗಳನ್ನು ಕೀಳಬಾರದು. ಅದಕ್ಕೂ ಜೀವವಿದೆ. ಆದ್ದರಿಂದ ಅವು ಬಿದ್ದಾಗ ತಂದು ಶಿವನ ಮುಡಿಗೇರಿಸುವುದು ಅಂದರೆ ಯಾರಿಗೂ ನೋವುಂಟು ಮಾಡಬಾರದೆಂಬ ಮಾನವೀಯ ಗುಣ ಅವರಲ್ಲಿತ್ತು’ ಎಂದು ಸ್ಮರಿಸಿದರು.</p>.<p>‘ಮುರುಘೇಂದ್ರ ಶಿವಯೋಗಿಗಳ ಚಾರಿತ್ರ್ಯವನ್ನು ಶಬ್ದಗಳಲ್ಲಿ ಹಿಡಿದಿಡುವುದು ಕಷ್ಟದ ಕೆಲಸ. ಅಂತಹ ಶಿವಯೋಗ ಸಾಧನೆಯ ಮೂಲಕ ಎತ್ತರಕ್ಕೆ ಹೋಗಿದ್ದರು’ ಎಂದು ಬಸವ ಮುರುಘೇಂದ್ರ ಸ್ವಾಮೀಜಿ ತಿಳಿಸಿದರು.</p>.<p>ಎಸ್ಜೆಎಂ ಫಾರ್ಮಸಿ ಕಾಲೇಜು ಪ್ರಾಂಶುಪಾಲ ನಾಗರಾಜ್, ಶಿಕ್ಷಕರಾದ ಕೊಟ್ರಮ್ಮ ಗಡ್ಡೆಪ್ಪನವರ್, ಗಿರೀಶಾಚಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>