ತಾಲ್ಲೂಕಿನ ಶ್ರೀರಾಂಪುರ, ಮಾಡದಕೆರೆ, ಮತ್ತೋಡು, ಬಾಗೂರು, ಬೆಲಗೂರು, ಕಂಚೀಪುರ, ಬಲ್ಲಾಳಸಮುದ್ರ, ಲಕ್ಕಿಹಳ್ಳಿ ಸೇರಿ ಇನ್ನಿತರ ಗ್ರಾಮಗಳಿಗೆ ಬೆಂಗಳೂರು, ಕೇರಳದಿಂದ ಹೆಚ್ಚಿನ ಜನ ಬಂದಿದ್ದಾರೆ. ಅಪರೂಪಕ್ಕೆ ಊರಿಗೆ ಬಂದಿರುವವರು ಗ್ರಾಮದ ತಮ್ಮ ಸಂಬಂಧಿ ಹಾಗೂ ಪರಿಚಯಸ್ಥರ ಮನೆಗಳಿಗೆ ನಿರಾತಂಕವಾಗಿ ಹೋಗುತ್ತಿದ್ದಾರೆ. ಬೆಂಗಳೂರಿಗೆ ಹೋಗಿದ್ದವರು ಈಗ ನಮ್ಮೂರಿಗೆ ಬಂದು ನಮಗೂ ತೊಂದರೆ ಕೊಡುತ್ತಿದ್ದಾರೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಹಳ್ಳಿಯ ಜನರಲ್ಲಿ ಕೊರೊನಾ ಭೀತಿ ಮೂಡಿಸಿದೆ.