ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಚಿತ್ರದುರ್ಗ | ಬಾಯ್ತೆರೆದ ಚರಂಡಿ, ಮ್ಯಾನ್‌ಹೋಲ್‌ಗಳಿಂದ ಅಪಾಯ

ಹದಗೆಟ್ಟ ಒಳಚರಂಡಿ ವ್ಯವಸ್ಥೆ; ಮಳೆಗಾಲ ನಿಭಾಯಿಸಲು ನಗರಸಭೆ ಸಿಬ್ಬಂದಿ ಸಿದ್ಧವಾಗಿದ್ದಾರಾ?
Published : 7 ಏಪ್ರಿಲ್ 2025, 7:02 IST
Last Updated : 7 ಏಪ್ರಿಲ್ 2025, 7:02 IST
ಫಾಲೋ ಮಾಡಿ
Comments
ಚಿತ್ರದುರ್ಗದ ಕೆಳಗೋಟೆಯಲ್ಲಿ ತೆರೆದ ಚರಂಡಿ ಅಪಾಯಕ್ಕೆ ಆಹ್ವಾನ ನೀಡುವಂತಿರುವುದು
ಚಿತ್ರದುರ್ಗದ ಕೆಳಗೋಟೆಯಲ್ಲಿ ತೆರೆದ ಚರಂಡಿ ಅಪಾಯಕ್ಕೆ ಆಹ್ವಾನ ನೀಡುವಂತಿರುವುದು
ಮಳೆಗಾಲ ಆರಂಭವಾಗುತ್ತಿದ್ದು ಅದರಿಂದ ಉಂಟಾಗುವ ಸಮಸ್ಯೆಗಳನ್ನು ನಗರ ಸ್ಥಳೀಯ ಸಂಸ್ಥೆಗಳು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದು ಪೌರಾಯುಕ್ತರು ಮತ್ತು ಮುಖ್ಯಾಧಿಕಾರಿಗೆ ಸೂಚನೆ ನೀಡಲಾಗಿದೆ
ಟಿ.ವೆಂಕಟೇಶ್‌ ಜಿಲ್ಲಾಧಿಕಾರಿ
ರಾಜಕಾಲುವೆಗೆ ವಿಚಿತ್ರ ತಿರುವು ಸುವರ್ಣಾ ಬಸವರಾಜ್‌
ಹಿರಿಯೂರು: ಯೋಜಿತ ರೀತಿಯಲ್ಲಿ ನಗರವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ರಚನೆಯಾಗಿದ್ದ ನಗರಾಭಿವೃದ್ಧಿ ಪ್ರಾಧಿಕಾರ ತನ್ನ ಜವಾಬ್ದಾರಿ ನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ತಾಜಾ ನಿದರ್ಶನ ನಗರದ ಆಶ್ರಯ ಕಾಲೊನಿಯಿಂದ ಚಿಟುಗುಮಲ್ಲೇಶ್ವರ ಬಡಾವಣೆಯವರೆಗೆ ನಿರ್ಮಿಸಿರುವ ರಾಜಕಾಲುವೆ. ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದ ಮಳೆ ಸುರಿದಲ್ಲಿ ಜನರ ಜೀವ ಆಸ್ತಿಪಾಸ್ತಿಗೆ ಹಾನಿಯಾಗದಂತೆ ಮಳೆಯ ನೀರು ಸರಾಗವಾಗಿ ಹರಿದು ಹೋಗಲು ರಾಜಕಾಲುವೆಗಳನ್ನು ನಿರ್ಮಿಸಲಾಗುತ್ತದೆ. ಆದರೆ ನಗರದಲ್ಲಿ ಆಶ್ರಯ ಕಾಲೊನಿಯಿಂದ ಆರಂಭವಾದ ರಾಜಕಾಲುವೆ ನೇರ ಮಾರ್ಗದಲ್ಲಿ ಸಾಗುತ್ತ ಹೋಗುತ್ತದೆ. ಆದರೆ ವಾಣಿವಿಲಾಸ ನಾಲೆ ದಾಟಿದ ತಕ್ಷಣ ನೇರವಾಗಿ ಕಾಲುವೆ ಹೋಗುವಂತೆ ನಕ್ಷೆ ರೂಪಿಸುವ ಬದಲು ವಿಚಿತ್ರ ರೀತಿಯಲ್ಲಿ ತಿರುವು ಪಡೆಯುತ್ತದೆ. ರಾಜಕಾಲುವೆಯನ್ನು ನೇರ ಮಾರ್ಗದಲ್ಲಿ ಒಯ್ದಿದ್ದರೆ ಗಾಂಧಿ ಬಡಾವಣೆ ಕೆಳಭಾಗದಲ್ಲಿ ಸಿಎಂ ಬಡಾವಣೆ ಮೇಲ್ಭಾಗದಲ್ಲಿ ಹಾದು ಹೋಗಿರುವ ರಾಜಕಾಲುವೆಗೆ ಸೇರುತ್ತಿತ್ತು.  ಪ್ರಾಧಿಕಾರ ಮಾಡಿದ ಯಡವಟ್ಟಿನಿಂದ 2013 2022ರಲ್ಲಿ ಸುರಿದ ಭಾರಿ ಮಳೆಗೆ ಇಡೀ ಚಿಟುಗುಮಲ್ಲೇಶ್ವರ ಬಡಾವಣೆ ನೀರಿನಲ್ಲಿ ಮುಳುಗಿ ದ್ವೀಪದಂತೆ ಆಗಿತ್ತು. ರಾಜಕಾಲುವೆ ಕಾಮಗಾರಿ ಮಲ್ಲೇಶ್ವರ ಬಡಾವಣೆಗೆ ಅಂತ್ಯಗೊಂಡು ಬಡಾವಣೆಯ ಮೇಲ್ಭಾಗದ ಮಳೆಯ ನೀರೆಲ್ಲ ಒಮ್ಮೆಗೆ ನುಗ್ಗಿದ್ದರಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರಸ್ತುತ ರಾಜಕಾಲುವೆ ಅಂತ್ಯಗೊಂಡಿರುವ ಮಲ್ಲೇಶ್ವರ ಬಡಾವಣೆಯ 30x40 ಅಳತೆಯ ಆರು ನಿವೇಶನಗಳಿಗೆ ಚರಂಡಿ ನೀರು ಹರಿದು ನಿವೇಶನ ಕಾಣದ ರೀತಿ ಹುಲ್ಲು ಬೆಳೆದು ನಿಂತಿದೆ. ನಿವೇಶನ ಖರೀದಿಸಿರುವವರು ಚರಂಡಿ ನೀರಿನಲ್ಲಿ ಮನೆ ನಿರ್ಮಿಸಲಾರದೆ ಬೇರೆಯವರಿಗೆ ಮಾರಲೂ ಆಗದೆ ಅಸಹಾಯಕರಾಗಿ ಕುಳಿತಿದ್ದಾರೆ ಎಂದು ನಿವಾಸಿಗಳು ಹೇಳುತ್ತಾರೆ.
ಚರಂಡಿ ಮೇಲೆ ಅಕ್ರಮ ಕಟ್ಟಡಗಳು ಶಿವಗಂಗಾ ಚಿತ್ತಯ್ಯ
ಚಳ್ಳಕೆರೆ: ನಗರಸಭೆ ನಿರ್ಲಕ್ಷ್ಯದಿಂದಾಗಿ ವಿವಿಧ ವಾರ್ಡ್‌ನ ಚರಂಡಿಯಲ್ಲಿ ಹಳೆ ಪ್ಲಾಸ್ಟಿಕ್ ಪೇಪರ್ ಕಡ್ಡಿ ಕಸ ತುಂಬಿಕೊಂಡಿದೆ. ಚರಂಡಿ ಸ್ವಚ್ಛತೆಗೊಳಿಸಿಲ್ಲ. ಜೊತೆಗೆ ಚರಂಡಿ ಒತ್ತುವರಿಯಿಂದಾಗಿ ಕೊಳಚೆ ನೀರಿನ ಸರಾಗ ಹರಿವಿಗೆ ತೊಂದರೆಯಾಗಿದೆ. ಚರಂಡಿಯ ಮೇಲೆ ಎಲ್ಲೆಂದರಲ್ಲೆ ಮನೆ ಕಟ್ಟಡ ಶೌಚಾಲಯ ಕಾಂಪೌಂಡ್ ಗೋಡೆಗಳನ್ನು ಅಕ್ರಮವಾಗಿ ನಿರ್ಮಿಸಿಕೊಂಡಿರುವ ಕಾರಣ ಅಲ್ಪ ಪ್ರಮಾಣದ ಮಳೆ ಬಿದ್ದರೂ ಗಾಂಧಿನಗರ ಅಂಬೇಡ್ಕರ್ ನಗರ ಜಗಜೀವನ್‌ರಾಂ ನಗರ ಜನತಾ ಕಾಲೊನಿ ಶಾಂತಿ ನಗರ ರಹೀಂನಗರ ಹಳೆ ಟೌನ್ ಮದಕರಿನಗರ ಕೊಲುಮೆಬೀದಿ ಮತ್ತು ನಗರದ ಹೊರವಲಯದ ಮೈರಾಢ ಕಾಲೊನಿ ಸೂಜಿ ಮಲ್ಲೇಶ್ವರ ನಗರ ಮುಂತಾದ ವಾರ್ಡ್‌ಗಳಲ್ಲಿ ಮನೆಗೆ ನೀರು ನುಗ್ಗಿ ಕೊಳಚೆ ಪ್ರದೇಶಗಳ ನಿವಾಸಿಗಳ ಜೀವನ ಅಸ್ತವ್ಯಸ್ತವಾಗುತ್ತವೆ. ನಗರದ ಮಧ್ಯೆ ಹಾದು ಹೋಗುವ ರಾಜಕಾಲುವೆಯನ್ನು ಸ್ವಚ್ಛಗೊಳಿಸುವುದರ ಜತೆಗೆ ದುರಸ್ತಿ ಕಾರ್ಯವೂ ಕೈಗೊಳ್ಳಬೇಕು. ಮಳೆ ನೀರು ಹರಿದು ಹೋಗಲು ಕ್ರಮ ಕೈಗೊಳ್ಳಬೇಕು ಎಂಬುದು ನಾಗರಿಕರ ಒತ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT