ಕೆಸರಿನ ನಡುವೆಯೇ ವ್ಯಾಪಾರ ಚಟುವಟಿಕೆ ನಡೆಯುತ್ತಿರುವ ಮೊಳಕಾಲ್ಮುರಿನ ವಾರದ ಸಂತೆಮೈದಾನದ ದೃಶ್ಯ
₹ 1 ಕೋಟಿ ಅನುದಾನ ಮಂಜೂರು
‘ನಗರೋತ್ಥಾನ ಯೋಜನೆ ಅಡಿ ಮೈದಾನದಲ್ಲಿ ಸೌಲಭ್ಯ ಕಲ್ಪಿಸಲು ₹ 1 ಕೋಟಿ ಅನುದಾನ ಮಂಜೂರಾಗಿದೆ. ನೀತಿಸಂಹಿತೆ ಇದ್ದ ಕಾರಣ ವಿಳಂಬವಾಗಿದ್ದು ಸಮಿತಿ ಸಭೆ ನಂತರ ಅನುದಾನ ಮಂಜೂರಾಗಲಿದೆ’ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಎಸ್.ಖಾದರ್ ಹೇಳಿದರು. ‘ಅನುದಾನ ಶೀಘ್ರ ಮಂಜೂರು ಮಾಡಿಸಿ ಕಾಮಗಾರಿ ಆರಂಭಿಸಬೇಕು. ಬುಧವಾರ ಆವರಣದಲ್ಲಿ ಕೂರಲು ಆಗದೇ ವ್ಯಾಪಾರಿಗಳು ರಸ್ತೆಬದಿಯಲ್ಲಿ ವಹಿವಾಟು ಮಾಡಿದರು. ಇದು ಮಳೆಗಾಲ ಆರಂಭವಾಗಿದ್ದು ತುರ್ತು ಕ್ರಮ ಕೈಗೊಳ್ಳುವ ಅಗತ್ಯವಿದೆ’ ಎಂದು ರೈತಸಂಘದ ಅಧ್ಯಕ್ ಮರ್ಲಹಳ್ಳಿ ರವಿಕುಮಾರ್ ಹೇಳಿದರು.