<p><strong>ಚಿತ್ರದುರ್ಗ:</strong> ‘ರೌಡಿಶೀಟ್ ಹೊಂದಿರುವವರು ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗದೇ ತಮ್ಮ ಪಾಡಿಗೆ ತಾವಿರಬೇಕು. ಬಾಲ ಬಿಚ್ಚುವುದು ಕಂಡುಬಂದರೆ ಗಡಿಪಾರಿಗೆ ಶಿಫಾರಸು ಮಾಡಲಾಗುವುದು’ ಎಂದು ಡಿವೈಎಸ್ಪಿ ಪಿ.ಕೆ.ದಿನಕರ್ ಎಚ್ಚರಿಕೆ ನೀಡಿದರು.</p>.<p>ನಗರದ ಪೊಲೀಸ್ ಮೈದಾನದಲ್ಲಿ ನಡೆದ ರೌಡಿಶೀಟರ್ಗಳ ಪೆರೇಡ್ನಲ್ಲಿ ಅವರು ಮಾತನಾಡಿದರು.</p>.<p>‘ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕು. ರೌಡಿಶೀಟರ್ಗಳು ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು. ಅವರ ಮೇಲೆ ಸದಾ ಕಾಲ ಪೊಲೀಸ್ ನಿಗಾ ಇರುತ್ತದೆ. ನ್ಯಾಯದ ಹಾದಿಯಲ್ಲಿ ಬದುಕಬೇಕು’ ಎಂದು ಸೂಚಿಸಿದರು.</p>.<p>‘ರೌಡಿಪಟ್ಟಿ ತೆರೆದ ನಂತರ ಅವರ ಬದುಕು ದುಸ್ತರವಾಗುತ್ತದೆ. ಮುಂದೆ ರೌಡಿಪಟ್ಟಿಯಿಂದ ಹೊರಬರುವ ರೀತಿಯಲ್ಲಿ ನಡೆದುಕೊಳ್ಳಬೇಕು. ಆ ಮೂಲಕ ರೌಡಿಶೀಟ್ನಿಂದ ಮುಕ್ತರಾಗಿ ನೆಮ್ಮದಿ ಬದುಕು ಕಂಡುಕೊಳ್ಳಬೇಕು. ಇಲ್ಲದಿದ್ದರೆ ಬುದ್ಧಿ ಕಲಿಸಲಾಗುವುದು’ ಎಂದರು.</p>.<p>ಇನ್ಸ್ಪೆಕ್ಟರ್ಗಳಾದ ದೊಡ್ಡಯ್ಯ, ಉಮೇಶ್ಬಾಬು, ಚಿಕ್ಕಣ್ಣನವರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ:</strong> ‘ರೌಡಿಶೀಟ್ ಹೊಂದಿರುವವರು ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗದೇ ತಮ್ಮ ಪಾಡಿಗೆ ತಾವಿರಬೇಕು. ಬಾಲ ಬಿಚ್ಚುವುದು ಕಂಡುಬಂದರೆ ಗಡಿಪಾರಿಗೆ ಶಿಫಾರಸು ಮಾಡಲಾಗುವುದು’ ಎಂದು ಡಿವೈಎಸ್ಪಿ ಪಿ.ಕೆ.ದಿನಕರ್ ಎಚ್ಚರಿಕೆ ನೀಡಿದರು.</p>.<p>ನಗರದ ಪೊಲೀಸ್ ಮೈದಾನದಲ್ಲಿ ನಡೆದ ರೌಡಿಶೀಟರ್ಗಳ ಪೆರೇಡ್ನಲ್ಲಿ ಅವರು ಮಾತನಾಡಿದರು.</p>.<p>‘ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕು. ರೌಡಿಶೀಟರ್ಗಳು ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು. ಅವರ ಮೇಲೆ ಸದಾ ಕಾಲ ಪೊಲೀಸ್ ನಿಗಾ ಇರುತ್ತದೆ. ನ್ಯಾಯದ ಹಾದಿಯಲ್ಲಿ ಬದುಕಬೇಕು’ ಎಂದು ಸೂಚಿಸಿದರು.</p>.<p>‘ರೌಡಿಪಟ್ಟಿ ತೆರೆದ ನಂತರ ಅವರ ಬದುಕು ದುಸ್ತರವಾಗುತ್ತದೆ. ಮುಂದೆ ರೌಡಿಪಟ್ಟಿಯಿಂದ ಹೊರಬರುವ ರೀತಿಯಲ್ಲಿ ನಡೆದುಕೊಳ್ಳಬೇಕು. ಆ ಮೂಲಕ ರೌಡಿಶೀಟ್ನಿಂದ ಮುಕ್ತರಾಗಿ ನೆಮ್ಮದಿ ಬದುಕು ಕಂಡುಕೊಳ್ಳಬೇಕು. ಇಲ್ಲದಿದ್ದರೆ ಬುದ್ಧಿ ಕಲಿಸಲಾಗುವುದು’ ಎಂದರು.</p>.<p>ಇನ್ಸ್ಪೆಕ್ಟರ್ಗಳಾದ ದೊಡ್ಡಯ್ಯ, ಉಮೇಶ್ಬಾಬು, ಚಿಕ್ಕಣ್ಣನವರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>