‘ಪಟ್ಟಿಯಲ್ಲಿ ಇರುವ ಮತದಾರರಿಗೆ ಕಾರ್ಡ್ ವಿತರಿಸುವುದು ಚುನಾವಣಾ ಆಯೋಗದ ಕೆಲಸವಾಗಿದೆ. ಹೀಗಾಗಿ ಸಂಬಂಧಪಟ್ಟ ಏಜೆನ್ಸಿಗೆ ಗುರುತಿನ ಚೀಟಿ ಮುದ್ರಿಸಲು ಪರವಾನಗಿ ನೀಡುತ್ತದೆ.ಆಯೋಗಕ್ಕೆ ಕೆಟ್ಟ ಹೆಸರು ತರುವ ಸಲುವಾಗಿ ಕೆಲವು ಅನಧಿಕೃತ ಕಂಪ್ಯೂಟರ್ ಸೆಂಟರ್ಗಳು, ಗುರುತಿನ ಚೀಟಿ ಮುದ್ರಿಸುವುದಲ್ಲದೆ ನಕಲಿ ಸಹಿ ಸೃಷ್ಟಿಸಿ ಚೀಟಿಯನ್ನು ದುಬಾರಿ ಹಣಕ್ಕೆ ಮಾರಾಟ ಮಾಡುವ ಮೂಲಕ ಮತದಾರರನ್ನು ವಂಚಿಸುತ್ತಿರುವುದುಗಮನಕ್ಕೆ ಬಂದಿದೆ. ಜಿಲ್ಲಾಧಿಕಾರಿ ಆದೇಶದಂತೆ ಅಂಗಡಿಯನ್ನು ಮುಚ್ಚಿಸಿ ಮಾಲೀಕರ ವಿರುದ್ಧದ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ರಘುಮೂರ್ತಿ ಹೇಳಿದರು.