ನೀರಿನ ಸಂಗ್ರಹಣೆಗೆ 2 ದಶಕಗಳ ಹಿಂದೆ ಕೆರೆ ಏರಿಯನ್ನು ನಿರ್ಮಾಣ ಮಾಡಲಾಗಿತ್ತು. ಈ ಗ್ರಾಮದ ಕೆರೆಯ ಸಮೀಪಕ್ಕೆ ವಾಣಿವಿಲಾಸ ಸಾಗರ ಜಲಾಶಯದ ಹಿನ್ನೀರು ಬಂದಿದೆ. ಇದರಿಂದಾಗಿ ತೇವಾಂಶ ಹೆಚ್ಚಾಗಿದ್ದು, ಕೆರೆಯ ಏರಿ ಒಡೆಯುವಂತಾಗಿದೆ. ಹಿನ್ನೀರು ಬಂದಿರುವುದರಿಂದ ವಿದ್ಯುತ್ ಕಂಬ ಹಾಗೂ ಗ್ರಾಮದ ಕುಡಿಯುವ ನೀರಿನ ಕೊಳವೆಬಾವಿಗಳು ಜಲಾವೃತವಾಗಿವೆ. ಇದರಿಂದ ಗ್ರಾಮದ ಜನರು ನೀರಿಗೆ ಪರದಾಡುವ ಸ್ಥಿತಿ ಎದುರಾಗಿದೆ.