ದಾಸಯ್ಯಗಳು ಪ್ರಸಾದ ಸ್ವೀಕಾರಕ್ಕೆ ಸಿದ್ಧರಾಗುತ್ತಾರೆ. ಬಾಳೆಎಲೆಯ ಮೇಲಿನ ಪ್ರಸಾದವನ್ನು ಕೈಯಿಂದ ಮುಟ್ಟದೆ, ಮಂಡಿಯೂರಿ, ನೇರವಾಗಿ ಎಡೆ ಸ್ವೀಕಾರ ಮಾಡಬೇಕು. ಇದನ್ನು ನೋಡಲು ನೂರಾರು ಜನರು ಸೇರುತ್ತಾರೆ. ಗ್ರಾಮದ ಮುಖಂಡರಾದ ಗೌಡ್ರ ಮಹದೇವಪ್ಪ, ಕೃಷ್ಣಮೂರ್ತಿ, ಪೂಜಾರ್ ತಿಮ್ಮಪ್ಪ, ಪೂಜಾರ್ ಮಧು, ಶಿವಣ್ಣ, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.