<p><span class="quote"><strong>ಚಿತ್ರದುರ್ಗ</strong>:</span>ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಎಲ್ಲ ಗೊಲ್ಲ ಸಮುದಾಯಗಳು ಇದನ್ನು ಬೆಂಬಲಿಸುವ ಅಗತ್ಯವಿದೆ ಎಂದು ಸಂಸ್ಕೃತಿ ಚಿಂತಕ ಬಂಜಗೆರೆ ಜಯಪ್ರಕಾಶ್ ಸಲಹೆ ನೀಡಿದರು.</p>.<p>ಪತ್ರಕರ್ತರ ಭವನದಲ್ಲಿ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘ ಗೊಲ್ಲ ಸಮುದಾಯದ ನಿವೃತ್ತ ನೌಕರರಿಗೆ ಭಾನುವಾರ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಕುಲ ಹಾಗೂ ಜಾತಿ ಬೇರೆ. ನಾವೆಲ್ಲರೂ ಕುಲವಾಗಿ ಗೊಲ್ಲರಾಗೋಣ. ಉಪ ಜಾತಿಗಳಲ್ಲಿ ಯಾವ ಸಮುದಾಯ ಹಿಂದುಳಿದಿದೆಯೋ ಅದರ ಅಭಿವೃದ್ಧಿಗೆ ಕೈಜೋಡಿಸೋಣ. ನ್ಯಾಯಯುತವಾಗಿ ಸಿಗಬೇಕಾದ ಸಂವಿಧಾನಿಕ ಹಕ್ಕುಗಳನ್ನು ಕೊಡಿಸಲು ಒಂದು ಕುಲವಾಗಿ ಒಗ್ಗಟ್ಟಿನಿಂದ ಹೋರಾಡುವುದನ್ನು ಬಿಟ್ಟರೆ ಯಾವ ಮಾರ್ಗವೂ ಇಲ್ಲ’ ಎಂದರು.</p>.<p>‘ಕುರುಬರು, ನಾಯಕರು ಸೇರಿ ಹಿಂದುಳಿದ ಸಮುದಾಯದವರು ನಮ್ಮವರೇ ಆಗಿದ್ದಾರೆ. ಅವರ ಬೆಂಬಲ ಇಲ್ಲದೆಯೇ ರಾಜಕೀಯವಾಗಿ ಬೆಳೆಯಲು ಖಂಡಿತ ಸಾಧ್ಯವಿಲ್ಲ. ಕುಲ ಸಂಯೋಜನೆ ಅಗತ್ಯವಾಗಿದ್ದು, ಜಾಣ್ಮೆಯಿಂದ ಯೋಚಿಸಿದರೆ ಅಭಿವೃದ್ಧಿ ಸಾಧ್ಯವಿದೆ’ ಎಂದು ಹೇಳಿದರು.</p>.<p><span class="quote">ಒಟ್ಟಾಗಿ ಗೋಕುಲ ನಿರ್ಮಿಸಿ:</span> ‘ಗೊಲ್ಲರು ಬಲಿಷ್ಟರಾಗಲು ಕುಲ ಸಮೀಕರಣ ಮಾಡಬೇಕಿದೆ. ಈ ವಿಚಾರದಲ್ಲಿ ನಮ್ಮೆಲ್ಲರ ಆಲೋಚನೆ ಸ್ಪಷ್ಟವಾಗಿರಬೇಕು. ಗುರುತಿಸುವಿಕೆ, ಹಂಚುವಿಕೆ, ಹೊಂದಾಣಿಕೆ ಮಾಡಿಕೊಂಡು ಮುಂದೆ ಸಾಗಬೇಕಿದೆ. ಗೊಲ್ಲರೆಲ್ಲರೂ ಒಟ್ಟಾಗಿ ಸೇರಿ ಗೋಕುಲ ನಿರ್ಮಿಸಬೇಕಿದೆ’ ಎಂದು ಅಭಿಪ್ರಾಯಪಟ್ಟರು.</p>.<p>‘ಜಾತಿಯ ಪಾಲನ್ನು ಪಡೆಯಲು ಕುಲದ ಹೆಸರನ್ನು ಬಳಸಿಕೊಳ್ಳಬಾರದು. ಎಲ್ಲಿ ಕಾಡುಗೊಲ್ಲರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೋ ಅಲ್ಲಿ ಅವರೇ ಬೆಳೆಯಲು ಅವಕಾಶ ಮಾಡಿಕೊಡಿ’ ಎಂದು ಗೊಲ್ಲರಿಗೆ ಮನವಿ ಮಾಡಿದರು.</p>.<p>‘ಶ್ರೀಕೃಷ್ಣ, ಬಸವಣ್ಣ, ವಾಲ್ಮೀಕಿ, ಅಂಬೇಡ್ಕರ್ ಗೊಲ್ಲರ ಲಾಂಛನವಾಗಬೇಕು. ಜಾತಿಗಾಗಿ ಯಾವ ಸಂಘವನ್ನಾದರೂ ಮಾಡಿಕೊಳ್ಳಿ. ಆದರೆ, ಕುಲವಾಗಿ ಒಂದೇ ಸಂಘವಿರಲಿ. ಅಲ್ಲಿ ಎಲ್ಲರೂ ಸೇರಿ ಚರ್ಚಿಸಲು ಅವಕಾಶವಿರಲಿ’ ಎಂದು ಸಲಹೆ ನೀಡಿದರು.</p>.<p><span class="quote">ಕಾಡುಗೊಲ್ಲರು ಎಸ್ಟಿಗೆ ಅರ್ಹರು:</span> ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಮಾಜಿ ಸಂಸದ ಕೋದಂಡರಾಮಯ್ಯ, ‘ಕಾಡುಗೊಲ್ಲರು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳ್ಳಲು ಅರ್ಹತೆ ಹೊಂದಿದ್ದಾರೆ. ಇದನ್ನು ಅರಿತು ಕೇಂದ್ರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ’ ಎಂದು ತಿಳಿಸಿದರು.</p>.<p>‘ಯಾವ ಸಮುದಾಯ ಸ್ತ್ರೀಯನ್ನು ಗೌರವಿಸುವುದಿಲ್ಲವೋ ಅದು ಮುಂದುವರೆಯಲು ಎಂದಿಗೂ ಸಾಧ್ಯವಿಲ್ಲ. ಹಾಥರಸ್ ಪ್ರಕರಣದಲ್ಲಿ ಅಲ್ಲಿನ ವಾಲ್ಮೀಕಿ ಸಮುದಾಯ ಸಂತ್ರಸ್ತೆಯ ಪರವಾಗಿ ನಿಂತಿದೆ. ಮಹಿಳೆಯರ ವಿಚಾರದಲ್ಲಿನ ಕೆಲ ಪದ್ಧತಿಗಳನ್ನು ಗೊಲ್ಲರು ಕೈಬಿಡಬೇಕಿದೆ’ ಎಂದರು.</p>.<p>‘ರಾಜಕೀಯ ಮುಖಂಡರನ್ನು ನಿಂದಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಸರ್ಕಾರಿ ಸೌಲಭ್ಯಗಳ ಜತೆಗೆ ಆರ್ಥಿಕವಾಗಿ ಮುಂದುವರೆಯಲು ಸ್ವ ಉದ್ಯೋಗ ಸೃಷ್ಟಿಸಿಕೊಳ್ಳಲು ಯುವಸಮೂಹ ಪ್ರಯತ್ನಿಸಬೇಕಿದೆ. ರಾಜಕೀಯವಾಗಿ ಬೆಳೆದು ನಾಯಕತ್ವ ಬೆಳೆಸಿಕೊಳ್ಳಿ’ ಎಂದು ಸಲಹೆ ನೀಡಿದರು.</p>.<p class="Subhead"><strong>‘ಬೇಲಿ ತೆಗೆದು ಮುನ್ನುಗ್ಗಿ’:</strong></p>.<p>‘ಗೋವುಗಳನ್ನು ಕಾಪಾಡಿಕೊಂಡು ಬಂದಿರುವ ದೇಶದಲ್ಲೇ ವಿಶಿಷ್ಟ ಸಮುದಾಯವಾದ ಗೊಲ್ಲರು ಸೌಲಭ್ಯಕ್ಕಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿದ್ದರೂ ಮೌಢ್ಯಾಚರಣೆಗಳಿಂದ ದೌರ್ಬಲ್ಯಕ್ಕೆ ಒಳಗಾಗಿದೆ’ ಎಂದು ಕವಿಯತ್ರಿ ಡಾ.ಎಚ್.ಎಲ್.ಪುಷ್ಪಾ ಅಭಿಪ್ರಾಯಪಟ್ಟರು.</p>.<p>‘ಎಲ್ಲ ಸಮುದಾಯಗಳು ಬೇರೆ ಸಮುದಾಯಗಳೊಂದಿಗೆ ಬೆರೆತು ಅಭಿವೃದ್ಧಿ ಹೊಂದುತ್ತಿವೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಕಟ್ಟುಪಾಡು ಇಟ್ಟುಕೊಂಡು ನಮ್ಮ ಸುತ್ತ ನಾವೇ ಬೇಲಿ ಹಾಕಿಕೊಂಡರೆ ಪ್ರಗತಿ ಹೊಂದಲು ಸಾಧ್ಯವೇ? ಬೇಲಿ ತೆಗೆದು ಮುನ್ನುಗ್ಗಿ’ ಎಂದು ಸಲಹೆ ನೀಡಿದರು.</p>.<p>ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಶಿವು ಯಾದವ್, ವಿರೋಧಪಕ್ಷದ ನಾಯಕರ ಆಪ್ತ ಕಾರ್ಯದರ್ಶಿ ಡಾ.ವೆಂಕಟೇಶಯ್ಯ ನೆಲ್ಲಕುಂಟೆ, ಮುಖಂಡರಾದ ಡಾ.ಸತೀಶ್, ಡಾ.ದೊಡ್ಡಮಲ್ಲಯ್ಯ, ಎನ್.ಆರ್.ಲಕ್ಷ್ಮಿಕಾಂತ್, ಜಯರಾಮ್, ಜಯಲಕ್ಷ್ಮಿ ಇದ್ದರು.</p>.<p>ಊರು ಗೊಲ್ಲರು, ಕಾಡುಗೊಲ್ಲರ ಮಧ್ಯೆ ದೊಡ್ಡ ಬಿರುಕು ಇದೆ. ಅದನ್ನು ಹೋಗಲಾಡಿಸಿದರೆ ಮಾತ್ರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಗೊಲ್ಲ ಸಮುದಾಯ ಬೆಳೆಯಬಹುದು.</p>.<p><strong>ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ, ಸಮುದಾಯದ ಚಿಂತಕ</strong></p>.<p>ಯಾವುದೇ ಸರ್ಕಾರವಿರಲಿ. ಮುಸ್ಲಿಂ, ನಾಯಕರು, ಕುರುಬರು, ಮಾದಿಗರು, ಗೊಲ್ಲರು ಸೇರಿ ಹಿಂದುಳಿದ ಸಮುದಾಯ ಒಗ್ಗೂಡಿ ಹಕ್ಕು ಕೇಳಬೇಕು. ಆಗ ಮಾತ್ರ ನ್ಯಾಯ ಪಡೆಯಲು ಸಾಧ್ಯ.</p>.<p><strong>ಡಾ.ಸಿ.ಜಿ.ಲಕ್ಷ್ಮಿಪತಿ, ಸಮಾಜ ಚಿಂತಕ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span class="quote"><strong>ಚಿತ್ರದುರ್ಗ</strong>:</span>ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಎಲ್ಲ ಗೊಲ್ಲ ಸಮುದಾಯಗಳು ಇದನ್ನು ಬೆಂಬಲಿಸುವ ಅಗತ್ಯವಿದೆ ಎಂದು ಸಂಸ್ಕೃತಿ ಚಿಂತಕ ಬಂಜಗೆರೆ ಜಯಪ್ರಕಾಶ್ ಸಲಹೆ ನೀಡಿದರು.</p>.<p>ಪತ್ರಕರ್ತರ ಭವನದಲ್ಲಿ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘ ಗೊಲ್ಲ ಸಮುದಾಯದ ನಿವೃತ್ತ ನೌಕರರಿಗೆ ಭಾನುವಾರ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಕುಲ ಹಾಗೂ ಜಾತಿ ಬೇರೆ. ನಾವೆಲ್ಲರೂ ಕುಲವಾಗಿ ಗೊಲ್ಲರಾಗೋಣ. ಉಪ ಜಾತಿಗಳಲ್ಲಿ ಯಾವ ಸಮುದಾಯ ಹಿಂದುಳಿದಿದೆಯೋ ಅದರ ಅಭಿವೃದ್ಧಿಗೆ ಕೈಜೋಡಿಸೋಣ. ನ್ಯಾಯಯುತವಾಗಿ ಸಿಗಬೇಕಾದ ಸಂವಿಧಾನಿಕ ಹಕ್ಕುಗಳನ್ನು ಕೊಡಿಸಲು ಒಂದು ಕುಲವಾಗಿ ಒಗ್ಗಟ್ಟಿನಿಂದ ಹೋರಾಡುವುದನ್ನು ಬಿಟ್ಟರೆ ಯಾವ ಮಾರ್ಗವೂ ಇಲ್ಲ’ ಎಂದರು.</p>.<p>‘ಕುರುಬರು, ನಾಯಕರು ಸೇರಿ ಹಿಂದುಳಿದ ಸಮುದಾಯದವರು ನಮ್ಮವರೇ ಆಗಿದ್ದಾರೆ. ಅವರ ಬೆಂಬಲ ಇಲ್ಲದೆಯೇ ರಾಜಕೀಯವಾಗಿ ಬೆಳೆಯಲು ಖಂಡಿತ ಸಾಧ್ಯವಿಲ್ಲ. ಕುಲ ಸಂಯೋಜನೆ ಅಗತ್ಯವಾಗಿದ್ದು, ಜಾಣ್ಮೆಯಿಂದ ಯೋಚಿಸಿದರೆ ಅಭಿವೃದ್ಧಿ ಸಾಧ್ಯವಿದೆ’ ಎಂದು ಹೇಳಿದರು.</p>.<p><span class="quote">ಒಟ್ಟಾಗಿ ಗೋಕುಲ ನಿರ್ಮಿಸಿ:</span> ‘ಗೊಲ್ಲರು ಬಲಿಷ್ಟರಾಗಲು ಕುಲ ಸಮೀಕರಣ ಮಾಡಬೇಕಿದೆ. ಈ ವಿಚಾರದಲ್ಲಿ ನಮ್ಮೆಲ್ಲರ ಆಲೋಚನೆ ಸ್ಪಷ್ಟವಾಗಿರಬೇಕು. ಗುರುತಿಸುವಿಕೆ, ಹಂಚುವಿಕೆ, ಹೊಂದಾಣಿಕೆ ಮಾಡಿಕೊಂಡು ಮುಂದೆ ಸಾಗಬೇಕಿದೆ. ಗೊಲ್ಲರೆಲ್ಲರೂ ಒಟ್ಟಾಗಿ ಸೇರಿ ಗೋಕುಲ ನಿರ್ಮಿಸಬೇಕಿದೆ’ ಎಂದು ಅಭಿಪ್ರಾಯಪಟ್ಟರು.</p>.<p>‘ಜಾತಿಯ ಪಾಲನ್ನು ಪಡೆಯಲು ಕುಲದ ಹೆಸರನ್ನು ಬಳಸಿಕೊಳ್ಳಬಾರದು. ಎಲ್ಲಿ ಕಾಡುಗೊಲ್ಲರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೋ ಅಲ್ಲಿ ಅವರೇ ಬೆಳೆಯಲು ಅವಕಾಶ ಮಾಡಿಕೊಡಿ’ ಎಂದು ಗೊಲ್ಲರಿಗೆ ಮನವಿ ಮಾಡಿದರು.</p>.<p>‘ಶ್ರೀಕೃಷ್ಣ, ಬಸವಣ್ಣ, ವಾಲ್ಮೀಕಿ, ಅಂಬೇಡ್ಕರ್ ಗೊಲ್ಲರ ಲಾಂಛನವಾಗಬೇಕು. ಜಾತಿಗಾಗಿ ಯಾವ ಸಂಘವನ್ನಾದರೂ ಮಾಡಿಕೊಳ್ಳಿ. ಆದರೆ, ಕುಲವಾಗಿ ಒಂದೇ ಸಂಘವಿರಲಿ. ಅಲ್ಲಿ ಎಲ್ಲರೂ ಸೇರಿ ಚರ್ಚಿಸಲು ಅವಕಾಶವಿರಲಿ’ ಎಂದು ಸಲಹೆ ನೀಡಿದರು.</p>.<p><span class="quote">ಕಾಡುಗೊಲ್ಲರು ಎಸ್ಟಿಗೆ ಅರ್ಹರು:</span> ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಮಾಜಿ ಸಂಸದ ಕೋದಂಡರಾಮಯ್ಯ, ‘ಕಾಡುಗೊಲ್ಲರು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳ್ಳಲು ಅರ್ಹತೆ ಹೊಂದಿದ್ದಾರೆ. ಇದನ್ನು ಅರಿತು ಕೇಂದ್ರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ’ ಎಂದು ತಿಳಿಸಿದರು.</p>.<p>‘ಯಾವ ಸಮುದಾಯ ಸ್ತ್ರೀಯನ್ನು ಗೌರವಿಸುವುದಿಲ್ಲವೋ ಅದು ಮುಂದುವರೆಯಲು ಎಂದಿಗೂ ಸಾಧ್ಯವಿಲ್ಲ. ಹಾಥರಸ್ ಪ್ರಕರಣದಲ್ಲಿ ಅಲ್ಲಿನ ವಾಲ್ಮೀಕಿ ಸಮುದಾಯ ಸಂತ್ರಸ್ತೆಯ ಪರವಾಗಿ ನಿಂತಿದೆ. ಮಹಿಳೆಯರ ವಿಚಾರದಲ್ಲಿನ ಕೆಲ ಪದ್ಧತಿಗಳನ್ನು ಗೊಲ್ಲರು ಕೈಬಿಡಬೇಕಿದೆ’ ಎಂದರು.</p>.<p>‘ರಾಜಕೀಯ ಮುಖಂಡರನ್ನು ನಿಂದಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಸರ್ಕಾರಿ ಸೌಲಭ್ಯಗಳ ಜತೆಗೆ ಆರ್ಥಿಕವಾಗಿ ಮುಂದುವರೆಯಲು ಸ್ವ ಉದ್ಯೋಗ ಸೃಷ್ಟಿಸಿಕೊಳ್ಳಲು ಯುವಸಮೂಹ ಪ್ರಯತ್ನಿಸಬೇಕಿದೆ. ರಾಜಕೀಯವಾಗಿ ಬೆಳೆದು ನಾಯಕತ್ವ ಬೆಳೆಸಿಕೊಳ್ಳಿ’ ಎಂದು ಸಲಹೆ ನೀಡಿದರು.</p>.<p class="Subhead"><strong>‘ಬೇಲಿ ತೆಗೆದು ಮುನ್ನುಗ್ಗಿ’:</strong></p>.<p>‘ಗೋವುಗಳನ್ನು ಕಾಪಾಡಿಕೊಂಡು ಬಂದಿರುವ ದೇಶದಲ್ಲೇ ವಿಶಿಷ್ಟ ಸಮುದಾಯವಾದ ಗೊಲ್ಲರು ಸೌಲಭ್ಯಕ್ಕಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿದ್ದರೂ ಮೌಢ್ಯಾಚರಣೆಗಳಿಂದ ದೌರ್ಬಲ್ಯಕ್ಕೆ ಒಳಗಾಗಿದೆ’ ಎಂದು ಕವಿಯತ್ರಿ ಡಾ.ಎಚ್.ಎಲ್.ಪುಷ್ಪಾ ಅಭಿಪ್ರಾಯಪಟ್ಟರು.</p>.<p>‘ಎಲ್ಲ ಸಮುದಾಯಗಳು ಬೇರೆ ಸಮುದಾಯಗಳೊಂದಿಗೆ ಬೆರೆತು ಅಭಿವೃದ್ಧಿ ಹೊಂದುತ್ತಿವೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಕಟ್ಟುಪಾಡು ಇಟ್ಟುಕೊಂಡು ನಮ್ಮ ಸುತ್ತ ನಾವೇ ಬೇಲಿ ಹಾಕಿಕೊಂಡರೆ ಪ್ರಗತಿ ಹೊಂದಲು ಸಾಧ್ಯವೇ? ಬೇಲಿ ತೆಗೆದು ಮುನ್ನುಗ್ಗಿ’ ಎಂದು ಸಲಹೆ ನೀಡಿದರು.</p>.<p>ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಶಿವು ಯಾದವ್, ವಿರೋಧಪಕ್ಷದ ನಾಯಕರ ಆಪ್ತ ಕಾರ್ಯದರ್ಶಿ ಡಾ.ವೆಂಕಟೇಶಯ್ಯ ನೆಲ್ಲಕುಂಟೆ, ಮುಖಂಡರಾದ ಡಾ.ಸತೀಶ್, ಡಾ.ದೊಡ್ಡಮಲ್ಲಯ್ಯ, ಎನ್.ಆರ್.ಲಕ್ಷ್ಮಿಕಾಂತ್, ಜಯರಾಮ್, ಜಯಲಕ್ಷ್ಮಿ ಇದ್ದರು.</p>.<p>ಊರು ಗೊಲ್ಲರು, ಕಾಡುಗೊಲ್ಲರ ಮಧ್ಯೆ ದೊಡ್ಡ ಬಿರುಕು ಇದೆ. ಅದನ್ನು ಹೋಗಲಾಡಿಸಿದರೆ ಮಾತ್ರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಗೊಲ್ಲ ಸಮುದಾಯ ಬೆಳೆಯಬಹುದು.</p>.<p><strong>ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ, ಸಮುದಾಯದ ಚಿಂತಕ</strong></p>.<p>ಯಾವುದೇ ಸರ್ಕಾರವಿರಲಿ. ಮುಸ್ಲಿಂ, ನಾಯಕರು, ಕುರುಬರು, ಮಾದಿಗರು, ಗೊಲ್ಲರು ಸೇರಿ ಹಿಂದುಳಿದ ಸಮುದಾಯ ಒಗ್ಗೂಡಿ ಹಕ್ಕು ಕೇಳಬೇಕು. ಆಗ ಮಾತ್ರ ನ್ಯಾಯ ಪಡೆಯಲು ಸಾಧ್ಯ.</p>.<p><strong>ಡಾ.ಸಿ.ಜಿ.ಲಕ್ಷ್ಮಿಪತಿ, ಸಮಾಜ ಚಿಂತಕ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>