ಪಕ್ಕದ ರಾಜ್ಯದಲ್ಲಿ ಆತಂಕ ಸೃಷ್ಟಿಸಿದ್ದ ಮಿಡತೆಗಳಿಂದ ಗಡಿಭಾಗದ ರೈತರು ಭಯಗೊಂಡಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೃಷಿ ಇಲಾಖೆ ಅಧಿಕಾರಿಗಳು, ‘ಪ್ರತಿವರ್ಷ ಬೇಸಿಗೆಯಲ್ಲಿ ಮಿಡತೆಗಳು ಸಂತಾನೋತ್ಪತ್ತಿನಡೆಸುತ್ತವೆ. ಹಾಗಾಗಿ ಗುಂಪು, ಗುಂಪಾಗಿ ಕಾಣಿಸಿಕೊಳ್ಳುತ್ತವೆ.ಇವು ಎಕ್ಕೆ ಗಿಡಗಳನ್ನು ಮಾತ್ರ ತಿನ್ನುತ್ತವೆ. ಬೇರೆ ಹಸಿರು ಗಿಡಗಳನ್ನು ತಿನ್ನುವುದಿಲ್ಲ. ಬಯಲುಸೀಮೆಯಲ್ಲಿ ಇಂತಹ ಮಿಡತೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಮಹಾರಾಷ್ಟ್ರದಲ್ಲಿ ಕಾಣಿಸಿಕೊಂಡಿರುವ ಮಿಡತೆಗಳು ಇವಲ್ಲ. ಮಿಡತೆಗಳ ಬಗ್ಗೆ ರೈತರ ಸಭೆ ನಡೆಸಿ ತಿಳಿಸಲಾಗಿದೆ ಎಂದು ಇಲಾಖೆಯ ರಾಜಣ್ಣಹೇಳಿದರು.