ಮಧ್ಯಾಹ್ನ ಹೂವುಗಳಿಂದ ಅಲಂಕರಿಸಿದ್ದ ರಥದಲ್ಲಿ ದೇವರನ್ನು ಕೂರಿಸಿ ರಥವನ್ನು ಎಳೆಯಲಾಯಿತು. ಮಹಿಳೆಯರು, ಮಕ್ಕಳು ರಥಬೀದಿಗೆ ನೀರುಹಾಕಿ ಭಕ್ತಿ ಸಮರ್ಪಿಸಿದರು. ಭಕ್ತರು ರಥಕ್ಕೆ ಚೂರುಬೆಲ್ಲ, ಮೆಣಸು, ಬಾಳೆಗಳನ್ನು ತೂರಿದರು. ಪಾದಗಟ್ಟೆಗೆ ರಥವನ್ನು ಎಳೆದು ತಂದು ಪೂಜೆ ನೆರವೇರಿಸಿದ ನಂತರ ಮತ್ತೆ ರಥವನ್ನು ದೇವಾಲಯದ ಸ್ವಸ್ಥಾನಕ್ಕೆ ಕರೆತರಲಾಯಿತು.