<p><strong>ಚಳ್ಳಕೆರೆ</strong>: ತಾಲ್ಲೂಕಿನ ದೊಡ್ಡೇರಿ ಗ್ರಾಮದ ನಿವೃತ್ತ ಉಪನ್ಯಾಸಕ ಡಿ.ಎಸ್. ರಾಜಣ್ಣರ ಅವರ ಜಮೀನಿನಲ್ಲಿ ಪಾಳೇಗಾರರ ಕಾಲದ ಕಬ್ಬಿಣದ ಸೌಟು ಹಾಗೂ ನೂತನ ಶಿಲಾಯುಧ (ಕಲ್ಲಿನ ಕೊಡಲಿ) ದೊರೆತಿವೆ ಎಂದು ಇತಿಹಾಸ ಸಂಶೋಧಕ ಮಹೇಶ್ ಕುಂಚಿಗನಾಳು ತಿಳಿಸಿದರು.</p>.<p>ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಗೈತಿಹಾಸ ಕಾಲದ ಆಯುಧವಾಗಿದ್ದು, ಅದಿಮಾನವ ಬದುಕಿನ ಕೊನೆ ಹಂತವಾದ ನವಶಿಲಾಯುಗದ (ನಿಯೋಲಿಥಿಕ್) ಕಾಲಕ್ಕೆ ಸೇರಿದೆ. ಕ್ರಿ.ಪೂ 4,500 ವರ್ಷದ ಹಿಂದೆಯೇ ಜನರು ಕಲ್ಲಿನ ಕೈ ಕೊಡಲಿ ಬಳಸುತ್ತಿದ್ದರು. ಹೀಗಾಗಿ ದೊಡ್ಡೇರಿ ಆ ಕಾಲಕ್ಕಾಗಲೆ ಪ್ರಾಗೈತಿಹಾಸಿಕ ನೆಲೆಯಾಗಿರುವುದರ ಜೊತೆಗೆ ಸೇನಾ ತಾಣವೂ ಆಗಿತ್ತು ಎಂಬುದು ಸ್ಪಷ್ಟವಾಗುತ್ತದೆ.</p>.<p>ಸಿರಾದ ನವಾಬರು, ಮರಾಠರು ಮತ್ತು ಚಿತ್ರದುರ್ಗ ಪಾಳೇಗಾರರ ಕಾಲದಲ್ಲಿ ಬಳಸುತ್ತಿದ್ದ 30 ಸೆ.ಮೀ ಉದ್ದ, 650 ಗ್ರಾಂ. ತೂಕದ ಕಬ್ಬಿಣದ ಸೌಟು ದೊಡ್ಡೇರಿ ಕೇಂದ್ರದಲ್ಲಿ ದೊರೆತಿದೆ ಎಂದು ಡಿ.ಎಸ್.ರಾಜಣ್ಣ ಹಾಗೂ ಸಂಶೋಧಕ ಮಹೇಶ್ ಕುಂಚಿಗನಾಳು ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಳ್ಳಕೆರೆ</strong>: ತಾಲ್ಲೂಕಿನ ದೊಡ್ಡೇರಿ ಗ್ರಾಮದ ನಿವೃತ್ತ ಉಪನ್ಯಾಸಕ ಡಿ.ಎಸ್. ರಾಜಣ್ಣರ ಅವರ ಜಮೀನಿನಲ್ಲಿ ಪಾಳೇಗಾರರ ಕಾಲದ ಕಬ್ಬಿಣದ ಸೌಟು ಹಾಗೂ ನೂತನ ಶಿಲಾಯುಧ (ಕಲ್ಲಿನ ಕೊಡಲಿ) ದೊರೆತಿವೆ ಎಂದು ಇತಿಹಾಸ ಸಂಶೋಧಕ ಮಹೇಶ್ ಕುಂಚಿಗನಾಳು ತಿಳಿಸಿದರು.</p>.<p>ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಗೈತಿಹಾಸ ಕಾಲದ ಆಯುಧವಾಗಿದ್ದು, ಅದಿಮಾನವ ಬದುಕಿನ ಕೊನೆ ಹಂತವಾದ ನವಶಿಲಾಯುಗದ (ನಿಯೋಲಿಥಿಕ್) ಕಾಲಕ್ಕೆ ಸೇರಿದೆ. ಕ್ರಿ.ಪೂ 4,500 ವರ್ಷದ ಹಿಂದೆಯೇ ಜನರು ಕಲ್ಲಿನ ಕೈ ಕೊಡಲಿ ಬಳಸುತ್ತಿದ್ದರು. ಹೀಗಾಗಿ ದೊಡ್ಡೇರಿ ಆ ಕಾಲಕ್ಕಾಗಲೆ ಪ್ರಾಗೈತಿಹಾಸಿಕ ನೆಲೆಯಾಗಿರುವುದರ ಜೊತೆಗೆ ಸೇನಾ ತಾಣವೂ ಆಗಿತ್ತು ಎಂಬುದು ಸ್ಪಷ್ಟವಾಗುತ್ತದೆ.</p>.<p>ಸಿರಾದ ನವಾಬರು, ಮರಾಠರು ಮತ್ತು ಚಿತ್ರದುರ್ಗ ಪಾಳೇಗಾರರ ಕಾಲದಲ್ಲಿ ಬಳಸುತ್ತಿದ್ದ 30 ಸೆ.ಮೀ ಉದ್ದ, 650 ಗ್ರಾಂ. ತೂಕದ ಕಬ್ಬಿಣದ ಸೌಟು ದೊಡ್ಡೇರಿ ಕೇಂದ್ರದಲ್ಲಿ ದೊರೆತಿದೆ ಎಂದು ಡಿ.ಎಸ್.ರಾಜಣ್ಣ ಹಾಗೂ ಸಂಶೋಧಕ ಮಹೇಶ್ ಕುಂಚಿಗನಾಳು ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>