ಕನ್ನಡ ಶಾಲೆಗಳ ಜಾಗೃತಿ ಕನಸು| ವಿದೇಶಗಳಿಗೆ ಸೈಕಲ್ ಯಾತ್ರೆ:ಸಿರಿಗೆರೆ ಯುವಕನ ಸಾಹಸ
ಸಿರಿಗೆರೆ ಸಮೀಪದ ಹನುಮನಹಳ್ಳಿ ಗ್ರಾಮದ ಯುವಕನ ಸಾಹಸ
ರಾಜ ಸಿರಿಗೆರೆ
Published : 6 ಏಪ್ರಿಲ್ 2024, 7:11 IST
Last Updated : 6 ಏಪ್ರಿಲ್ 2024, 7:11 IST
ಫಾಲೋ ಮಾಡಿ
Comments
ವಿಯೆಟ್ನಾಂ – ಕಾಂಬೋಡಿಯಾ ದೇಶದ ಭೂ ಗಡಿಯಲ್ಲಿ ಕನ್ನಡ ಬಾವುಟದೊಂದಿಗೆ ಸುದರ್ಶನ್
ಹೂ ಚಿ ಮಿನ್ ನಗರದಲ್ಲಿನ ಸಮುದಾಯದೊಂದಿಗೆ ಸುದರ್ಶನ್
45,000 ಕಿ.ಮೀ. ಸೈಕಲ್ ಯಾತ್ರೆ
ಸುದರ್ಶನ್ ಇದುವರೆಗೆ ಸೈಕಲ್ ಮೂಲಕ ಮಾಡಿರುವ ಪ್ರವಾಸ 45,000 ಕಿ.ಮೀ. ಮೀರಿದೆ. 2021ರಲ್ಲಿ ಅವರು ಬೆಂಗಳೂರಿನಿಂದ ಭಾರತ ಸೈಕಲ್ ಯಾತ್ರೆ ಆರಂಭಿಸಿದ್ದರು. ತಮಿಳುನಾಡು, ಕೇರಳ, ಗೋವಾ, ಕರ್ನಾಟಕ, ತೆಲಂಗಾಣ, ಛತ್ತೀಸಗಡ, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ಸಿಕ್ಕಿಂ, ಮೇಘಾಲಯ, ತ್ರಿಪುರ ರಾಜ್ಯಗಳ ಬಹುತೇಕ ಎಲ್ಲ ಜಿಲ್ಲೆಗಳನ್ನು ಸುತ್ತಿದ್ದರು. ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಅಸ್ಸಾಂ, ಮಿಜೋರಾಂ ರಾಜ್ಯಗಳಲ್ಲೂ ಸುತ್ತಾಟ ನಡೆಸಿದ್ದರು. ಈ ಸಂದರ್ಭದಲ್ಲಿ ಕನ್ನಡ ಶಾಲೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರಗಳು ಬಜೆಟ್ನಲ್ಲಿ ಹೆಚ್ಚು ಹಣವನ್ನು ತೆಗೆದಿರಿಸಲು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು.