‘ಕಾಂಗ್ರೆಸ್ ಪಕ್ಷದ ಭದ್ರಕೋಟೆ ಆಗಿದ್ದ ಚಿತ್ರದುರ್ಗ ವಿಧಾನಪರಿಷತ್ ಕ್ಷೇತ್ರದಲ್ಲಿ ಪಕ್ಷದ ಬೆಂಬಲಿಗರೇ ಗೆಲುವು ಸಾಧಿಸುತ್ತಿದ್ದರು. ಹೀಗಾಗಿ, ಗೆದ್ದೇ ಬಿಟ್ಟೆವು ಎಂದು ನಾವೆಲ್ಲರೂ ಅತ್ಯಂತ ಉತ್ಸಾಹದಿಂದ ಇದ್ದೆವು. ಕೊನೆಗಳಿಗೆಯಲ್ಲಿ ಆಡಳಿತ ಪಕ್ಷದ ತಂತ್ರಗಾರಿಕೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನಮ್ಮ ಕೈಯಲ್ಲಿದ್ದ ಗೆಲುವನ್ನು ಬಿಜೆಪಿಗೆ ನಾವೇ ಕೊಟ್ಟಂತೇ ಆಗಿದೆ. ಇಲ್ಲಿ ನಾವು ಮಾಡಿರುವ ತಪ್ಪನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ’ ಎಂದು ಹೇಳಿದ್ದಾರೆ.