ಜಾತ್ರೋತ್ಸವಕ್ಕೂ ಮುನ್ನ ಸಮೀಪದ ಹೊನ್ನೇನಹಳ್ಳಿಯಲ್ಲಿ ದೇವಿಗೆ ನಡೆಯುವ ಆರತಿ ಭಾನೋತ್ಸವವು ಗಮನ ಸೆಳೆಯಿತು. ರಥೋತ್ಸವಕ್ಕೂ ಮುನ್ನ ದೇವಿಯು ಸುತ್ತಲಿನ ನಾಗತಿಹಳ್ಳಿ, ಮಸಣಿಹಳ್ಳಿ, ಕೋಡಿಹಳ್ಳಿ, ಯಲ್ಲಾಭೋವಿಹಟ್ಟಿ, ಮೂಡ್ಲಭೋವಿಹಟ್ಟಿ, ದೇವರಹಟ್ಟಿ, ಬೋಚೇನಹಳ್ಳಿ, ಬೆನಕನಹಳ್ಳಿ, ನರಸೀಪುರ ಗ್ರಾಮಗಳಿಗೆ ಸೆಳೆ (ಸುತ್ತಲಿನ ಗ್ರಾಮಗಳಿಗೆ ತೆರಳಿ ಭಕ್ತರಿಂದ ಸೇವೆ ಸ್ವೀಕರಿಸುವುದು) ಹೋಗುವುದು ಇಲ್ಲಿನ ವಿಶೇಷ.