‘ದಿನಕ್ಕೆ 1,000 ಅಥವಾ 1,500 ತೆಂಗಿನ ಕಾಯಿಗಳನ್ನು ಸುಲಿಯುತ್ತೇವೆ. ಸಾವಿರಕ್ಕೆ ₹ 500 ಕೂಲಿ ಕೊಡುತ್ತಾರೆ. ಕೆಲವೊಮ್ಮೆ 400–500 ಕಾಯಿಗಳನ್ನು ಮಾತ್ರ ಸುಲಿಯುತ್ತೇವೆ. ವಾರದಲ್ಲಿ ಮೂರು ನಾಲ್ಕು ದಿನ ಕೆಲಸ ಇರುತ್ತದೆ. ಉಳಿದ ದಿನಗಳಲ್ಲಿ ಕೆಲಸ ಇರುವುದಿಲ್ಲ. ಬರುವ ಹಣದಲ್ಲಿ ಮಕ್ಕಳ ಶಿಕ್ಷಣ, ದಿನಸಿ, ತರಕಾರಿ, ಆಸ್ಪತ್ರೆ ಮತ್ತಿತರ ಖರ್ಚುಗಳಿಗೆ ಹಣ ಉಳಿಸಬೇಕು. ಊರಲ್ಲಿ ಕೆಲಸ ಇಲ್ಲ. ಹಾಗಾಗಿ ಇಲ್ಲಿಗೆ ಬಂದಿದ್ದೇವೆ’ ಎನ್ನುತ್ತಾರೆ ಹೊಸದುರ್ಗ ತಾಲ್ಲೂಕಿನ ಬೀಸನಹಳ್ಳಿ ಗ್ರಾಮದ ನಾಗಪ್ಪ ಹಾಗೂ ನರಸಿಂಹಪ್ಪ.