‘ಸಂಶೋಧನಾ ಕೇಂದ್ರದ ಆವರಣದಲ್ಲಿ ಮೊಲ, ಜಿಂಕೆ, ನವಿಲು, ಕೃಷ್ಣಮೃಗ ಕಾಡುಹಂದಿ ಸೇರಿ ಕಾಡುಪ್ರಾಣಿಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ, ಚಿರತೆಗೆ ಉತ್ತಮ ಆಹಾರ ದೊರೆಯುತ್ತಿರುವ ಸ್ಥಳವಾಗಿದ್ದು, ಹಲವು ದಿನಗಳಿಂದ ಇಲ್ಲೇ ಬೀಡು ಬಿಟ್ಟಂತಿದೆ. ತುರ್ತಾಗಿ ಚಿರತೆಯನ್ನು ಹಿಡಿದು ಸಿಬ್ಬಂದಿ ಭಯವನ್ನು ಹೋಗಲಾಡಿಸಬೇಕು’ ಎಂದು ಐಐಎಸ್ಸಿ ಎಂಜಿನಿಯರ್ ಹೇಮಂತ್ ಅವರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.