‘2015ರಲ್ಲಿ ಟೊಮೆಟೊ, ಕಲ್ಲಂಗಡಿ, ಪಪ್ಪಾಯ ನಾಟಿ ಮಾಡಿದೆ. ಆ ವರ್ಷ ಟೊಮೆಟೊಗೆ ಉತ್ತಮ ಬೆಲೆ ಬಂದಿತ್ತು. ಕಲ್ಲಂಗಡಿ, ಪಪ್ಪಾಯ ಬೆಳೆಯಲ್ಲೂ ಲಾಭವಾಯಿತು. ಹಣ್ಣು–ತರಕಾರಿ ಬೆಳೆಯಲು ಮೂರು ಎಕರೆ ಉಳಿಸಿಕೊಂಡು, ಉಳಿದ ಜಮೀನಿನಲ್ಲಿ ಅಡಿಕೆ ಸಸಿ ಹಾಕಿದೆ. ಅಡಿಕೆ ಫಸಲು ಈಗ ಆರಂಭವಾಗಿದೆ. ಹಿಂದಿನ ವರ್ಷವೂ ಮೂರು ಎಕರೆಯಲ್ಲಿ ಟೊಮೆಟೊ ಹಾಕಿದ್ದೆ. ದರ ಕುಸಿದ ಕಾರಣ ಮತ್ತೆ ನಷ್ಟ ಅನುಭವಿಸಬೇಕಾಯಿತು. ಈ ವರ್ಷ ಊಹೆಗೂ ಮೀರಿದ ದರ ಸಿಕ್ಕಿದ್ದರಿಂದ ಕಹಿ ಅನುಭವಗಳು ಮಾಯವಾಗುತ್ತಿವೆ’ ಎಂದು ಅವರು ನಗೆ ಬೀರಿದರು.