<p><strong>ಹೊಸದುರ್ಗ:</strong> ‘ಒಬ್ಬ ಗುರು ಮಾಡಿದ ನೀಚ ಕೆಲಸ ಮಾತ್ರ ಬಯಲಾಗಿದೆ. ಬಯಲಿಗೆ ಬಾರದೇ ಇರುವ ಹಲವು ಗುರುಗಳು ಸಮಾಜದಲ್ಲಿ ಇದ್ದಾರೆ’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಕ್ಷೇಪಿಸಿದರು.</p>.<p>ಶುಕ್ರವಾರ ಪಟ್ಟಣದ ಹಳೆಯ ಪ್ರವಾಸಿ ಮಂದಿರದ ಆವರಣದಲ್ಲಿ ನಿರ್ಮಾಣಗೊಂಡ ಕನ್ನಡ ಭವನ ಲೋಕಾರ್ಪಣೆ ಹಾಗೂ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>ಸಮಾಜದ ಚುಕ್ಕಾಣಿ ಹಿಡಿಯುವ ವ್ಯಕ್ತಿ ಅಜ್ಞಾನಿಯಾದಲ್ಲಿ ಸಮಾಜಮುಖಿ ಕೆಲಸ ಮಾಡಲು ಸಾಧ್ಯವಿಲ್ಲ. ಆತ ಪರಮ ನೀಚನಾಗದೇ, ಪರಮಪ್ರೇಮಿಯಾಗಬೇಕು. ಮನೆ, ಮಠ, ಊರುಗಳಲ್ಲಿ ಸನ್ಮಾರ್ಗ ತೋರಿಸುವ ಕೆಲಸ ಕಣ್ಮರೆಯಾಗುತ್ತಿದೆ. ವಿವೇಕಿಗಳು ಇಲ್ಲದಿರುವುದರಿಂದ ಸಮಾಜ ದುಃಸ್ಥಿತಿಯತ್ತ ಸಾಗುತ್ತಿರುವುದು ದುರದೃಷ್ಟಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.</p>.<p><strong>‘ಪ್ರಸಾದಕ್ಕೆ ವಿಷ ಹಾಕಿಸಿದ ಸ್ವಾಮೀಜಿ ಅಯೋಗ್ಯ’</strong><br />‘ದೇವಸ್ಥಾನದ ಪ್ರಸಾದಕ್ಕೆ ವಿಷ ಹಾಕಿಸಿದ ಸ್ವಾಮೀಜಿ ಅಯೋಗ್ಯ. ಆತ ಓದಿಕೊಂಡು ಬಂದವನಲ್ಲ. ಮೇಕೆಗೆ ಇರುವ ಸಾಮಾನ್ಯ ಗುಣ ಆತನಿಗಿಲ್ಲ’ ಎಂದು ಕೆಲ್ಲೋಡು ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಕಿಡಿಕಾರಿದರು.</p>.<p>ಇಂತಹ ನೀಚ ಕೆಲಸ ಮಾಡುವವರು ಇರುವುದರಿಂದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರಿಗೆ ಪ್ರಸಾದ ತಯಾರಿಸುವಾಗ ಕಣ್ಗಾವಲಾಗಿ ಕಾಯಬೇಕಿದೆ. ಹಾಗೆಯೇ, ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತಹ ಸ್ಥಿತಿ ನಿರ್ಮಾಣವಾಗಿರುವುದು ವಿಷಾದನೀಯ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸದುರ್ಗ:</strong> ‘ಒಬ್ಬ ಗುರು ಮಾಡಿದ ನೀಚ ಕೆಲಸ ಮಾತ್ರ ಬಯಲಾಗಿದೆ. ಬಯಲಿಗೆ ಬಾರದೇ ಇರುವ ಹಲವು ಗುರುಗಳು ಸಮಾಜದಲ್ಲಿ ಇದ್ದಾರೆ’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಕ್ಷೇಪಿಸಿದರು.</p>.<p>ಶುಕ್ರವಾರ ಪಟ್ಟಣದ ಹಳೆಯ ಪ್ರವಾಸಿ ಮಂದಿರದ ಆವರಣದಲ್ಲಿ ನಿರ್ಮಾಣಗೊಂಡ ಕನ್ನಡ ಭವನ ಲೋಕಾರ್ಪಣೆ ಹಾಗೂ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>ಸಮಾಜದ ಚುಕ್ಕಾಣಿ ಹಿಡಿಯುವ ವ್ಯಕ್ತಿ ಅಜ್ಞಾನಿಯಾದಲ್ಲಿ ಸಮಾಜಮುಖಿ ಕೆಲಸ ಮಾಡಲು ಸಾಧ್ಯವಿಲ್ಲ. ಆತ ಪರಮ ನೀಚನಾಗದೇ, ಪರಮಪ್ರೇಮಿಯಾಗಬೇಕು. ಮನೆ, ಮಠ, ಊರುಗಳಲ್ಲಿ ಸನ್ಮಾರ್ಗ ತೋರಿಸುವ ಕೆಲಸ ಕಣ್ಮರೆಯಾಗುತ್ತಿದೆ. ವಿವೇಕಿಗಳು ಇಲ್ಲದಿರುವುದರಿಂದ ಸಮಾಜ ದುಃಸ್ಥಿತಿಯತ್ತ ಸಾಗುತ್ತಿರುವುದು ದುರದೃಷ್ಟಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.</p>.<p><strong>‘ಪ್ರಸಾದಕ್ಕೆ ವಿಷ ಹಾಕಿಸಿದ ಸ್ವಾಮೀಜಿ ಅಯೋಗ್ಯ’</strong><br />‘ದೇವಸ್ಥಾನದ ಪ್ರಸಾದಕ್ಕೆ ವಿಷ ಹಾಕಿಸಿದ ಸ್ವಾಮೀಜಿ ಅಯೋಗ್ಯ. ಆತ ಓದಿಕೊಂಡು ಬಂದವನಲ್ಲ. ಮೇಕೆಗೆ ಇರುವ ಸಾಮಾನ್ಯ ಗುಣ ಆತನಿಗಿಲ್ಲ’ ಎಂದು ಕೆಲ್ಲೋಡು ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಕಿಡಿಕಾರಿದರು.</p>.<p>ಇಂತಹ ನೀಚ ಕೆಲಸ ಮಾಡುವವರು ಇರುವುದರಿಂದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರಿಗೆ ಪ್ರಸಾದ ತಯಾರಿಸುವಾಗ ಕಣ್ಗಾವಲಾಗಿ ಕಾಯಬೇಕಿದೆ. ಹಾಗೆಯೇ, ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತಹ ಸ್ಥಿತಿ ನಿರ್ಮಾಣವಾಗಿರುವುದು ವಿಷಾದನೀಯ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>