<p><strong>ಮೊಳಕಾಲ್ಮುರು:</strong> ಪಟ್ಟಣದ ವಿವಿಧೆಡೆ ಇತ್ತೀಚಿಗೆ ಕಳ್ಳರು ಮತ್ತು ಅನಾಮಿಕ ವ್ಯಕ್ತಿಗಳ ಓಡಾಟ ಹೆಚ್ಚಿದ್ದು, ನಾಗರಿಕರು ಭಯ ಭೀತರಾಗಿದ್ದಾರೆ.</p>.<p>ಕೋನಸಾಗರ ರಸ್ತೆಯಲ್ಲಿರುವ ಎನ್ಐ ಬಡಾವಣೆಯಲ್ಲಿ ರಾತ್ರಿ ವೇಳೆ ಹಲವು ದಿನಗಳಿಂದ ತಡರಾತ್ರಿ ಮುಸುಕುಧಾರಿ ವ್ಯಕ್ತಿಗಳು ಓಡಾಟ ನಡೆಸುತ್ತಿರುವುದು, ಮನೆಗಳ ಮುಂದೆ ನಿಂತು ವೀಕ್ಷಿಸುವುದು ಕಂಡುಬಂದಿದೆ. ಮನೆಗಳ ಸಿಸಿಟಿವಿ ಕ್ಯಾಮೆರಾಗಳಲ್ಲಿ ಈ ದೃಶ್ಯಗಳು ದಾಖಲಾಗಿದೆ ಎಂದು ನಿವಾಸಿಗಳು ಹೇಳಿದರು.</p>.<p>ಕಳ್ಳತನ ಘಟನೆಗಳು ನಡೆದಿಲ್ಲ, ಆದರೆ ಯಾವ ಕಾರಣಕ್ಕಾಗಿ ಇವರು ಬಂದು ಹೋಗುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಈಚೆಗೆ ಮುಸುಕುಧಾರಿ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಓಡಾಡುತ್ತಾ ಮನೆ ಮುಂದಿನ ಬೀದಿದೀಪದ ಸ್ವಿಚ್ ಆಫ್ ಮಾಡಿರುವುದು ದೃಶ್ಯಗಳಲ್ಲಿ ಇದೆ. ಈ ಕುರಿತು ಸ್ಥಳೀಯ ಪೊಲೀಸರ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.</p>.<p>ರಾತ್ರಿ ಪೊಲೀಸ್ ಗಸ್ತು ವಾಹನ ಸೈರನ್ ಹಾಕಿಕೊಂಡು ಓಡಾಡುತ್ತದೆ. ಇದರಿಂದ ಕಳ್ಳರಿಗೆ ಸುಲಭವಾಗಿ ಪೊಲೀಸರು ಬರುವುದು ಗೊತ್ತಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಅನುಕೂಲವಾಗುತ್ತಿದೆ. ನೈಪುಣ್ಯತೆ ಬಳಸಿ ಕಳ್ಳರನ್ನು ಹಿಡಿಯಲು ಮುಂದಾಗಬೇಕು. ಮನೆಗೆ ಬೀಗ ಹಾಕಿಕೊಂಡು ಊರಿಗೆ ಹೋಗಲು ಭಯವಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.</p>.<p>ಅಪರಿಚಿತ ವ್ಯಕ್ತಿಗಳು ಓಡಾಟ ನಡೆಸುತ್ತಿರುವ ಬಗ್ಗೆ ದೂರು ಬಂದಿದೆ. ಹೆಚ್ಚಿನ ಸಿಬ್ಬಂದಿಯನ್ನು ರಾತ್ರಿ ವೇಳೆ ನಿಯೋಜನೆಗೆ ಕ್ರಮ ಕೈಗೊಳ್ಳಲಾಗಿದೆ. ಪಕ್ಕದ ಆಂಧ್ರ ಪ್ರದೇಶದಿಂದ ದುಷ್ಕರ್ಮಿಗಳು ಬಂದಿರುವ ಶಂಕೆಯಿದೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪಿಎಸ್ಐ ಮಹೇಶ್ ಹೊಸಪೇಟೆ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೊಳಕಾಲ್ಮುರು:</strong> ಪಟ್ಟಣದ ವಿವಿಧೆಡೆ ಇತ್ತೀಚಿಗೆ ಕಳ್ಳರು ಮತ್ತು ಅನಾಮಿಕ ವ್ಯಕ್ತಿಗಳ ಓಡಾಟ ಹೆಚ್ಚಿದ್ದು, ನಾಗರಿಕರು ಭಯ ಭೀತರಾಗಿದ್ದಾರೆ.</p>.<p>ಕೋನಸಾಗರ ರಸ್ತೆಯಲ್ಲಿರುವ ಎನ್ಐ ಬಡಾವಣೆಯಲ್ಲಿ ರಾತ್ರಿ ವೇಳೆ ಹಲವು ದಿನಗಳಿಂದ ತಡರಾತ್ರಿ ಮುಸುಕುಧಾರಿ ವ್ಯಕ್ತಿಗಳು ಓಡಾಟ ನಡೆಸುತ್ತಿರುವುದು, ಮನೆಗಳ ಮುಂದೆ ನಿಂತು ವೀಕ್ಷಿಸುವುದು ಕಂಡುಬಂದಿದೆ. ಮನೆಗಳ ಸಿಸಿಟಿವಿ ಕ್ಯಾಮೆರಾಗಳಲ್ಲಿ ಈ ದೃಶ್ಯಗಳು ದಾಖಲಾಗಿದೆ ಎಂದು ನಿವಾಸಿಗಳು ಹೇಳಿದರು.</p>.<p>ಕಳ್ಳತನ ಘಟನೆಗಳು ನಡೆದಿಲ್ಲ, ಆದರೆ ಯಾವ ಕಾರಣಕ್ಕಾಗಿ ಇವರು ಬಂದು ಹೋಗುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಈಚೆಗೆ ಮುಸುಕುಧಾರಿ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಓಡಾಡುತ್ತಾ ಮನೆ ಮುಂದಿನ ಬೀದಿದೀಪದ ಸ್ವಿಚ್ ಆಫ್ ಮಾಡಿರುವುದು ದೃಶ್ಯಗಳಲ್ಲಿ ಇದೆ. ಈ ಕುರಿತು ಸ್ಥಳೀಯ ಪೊಲೀಸರ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.</p>.<p>ರಾತ್ರಿ ಪೊಲೀಸ್ ಗಸ್ತು ವಾಹನ ಸೈರನ್ ಹಾಕಿಕೊಂಡು ಓಡಾಡುತ್ತದೆ. ಇದರಿಂದ ಕಳ್ಳರಿಗೆ ಸುಲಭವಾಗಿ ಪೊಲೀಸರು ಬರುವುದು ಗೊತ್ತಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಅನುಕೂಲವಾಗುತ್ತಿದೆ. ನೈಪುಣ್ಯತೆ ಬಳಸಿ ಕಳ್ಳರನ್ನು ಹಿಡಿಯಲು ಮುಂದಾಗಬೇಕು. ಮನೆಗೆ ಬೀಗ ಹಾಕಿಕೊಂಡು ಊರಿಗೆ ಹೋಗಲು ಭಯವಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.</p>.<p>ಅಪರಿಚಿತ ವ್ಯಕ್ತಿಗಳು ಓಡಾಟ ನಡೆಸುತ್ತಿರುವ ಬಗ್ಗೆ ದೂರು ಬಂದಿದೆ. ಹೆಚ್ಚಿನ ಸಿಬ್ಬಂದಿಯನ್ನು ರಾತ್ರಿ ವೇಳೆ ನಿಯೋಜನೆಗೆ ಕ್ರಮ ಕೈಗೊಳ್ಳಲಾಗಿದೆ. ಪಕ್ಕದ ಆಂಧ್ರ ಪ್ರದೇಶದಿಂದ ದುಷ್ಕರ್ಮಿಗಳು ಬಂದಿರುವ ಶಂಕೆಯಿದೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪಿಎಸ್ಐ ಮಹೇಶ್ ಹೊಸಪೇಟೆ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>