ಶನಿವಾರ, 18 ಅಕ್ಟೋಬರ್ 2025
×
ADVERTISEMENT
ADVERTISEMENT

ಮೊಳಕಾಲ್ಮುರು: ಬೆಂಗಳೂರಿನ ಸಭೆ ನಂತರ ಆಸ್ಪತ್ರೆ ಸ್ಥಳ ನಿಗದಿ: ಗುಂಡೂರಾವ್‌

ಭವಿಷ್ಯದ ಹಿತದೃಷ್ಟಿ, ಸಾಧಕ, ಬಾಧಕ ಪರಿಶೀಲನೆ: ಸಚಿವ ದಿನೇಶ್‌ ಗುಂಡೂರಾವ್‌ ಹೇಳಿಕೆ
Published : 18 ಅಕ್ಟೋಬರ್ 2025, 7:29 IST
Last Updated : 18 ಅಕ್ಟೋಬರ್ 2025, 7:29 IST
ಫಾಲೋ ಮಾಡಿ
Comments
ಹೊಸ ಸ್ಥಳ ಸೂಕ್ತ
ಎನ್‌ವೈಜಿ ‘ವಿಶಾಲ ಸ್ಥಳದಲ್ಲಿ 200 ಹಾಸಿಗೆಗಳುಳ್ಳ ಆಸ್ಪತ್ರೆ ನಿರ್ಮಿಸುವುದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು. ಈಗಿರುವ ಕಟ್ಟಡವನ್ನು ಬೇರೆ ಆರೋಗ್ಯ ಕಾರ್ಯಕ್ರಮಕ್ಕೆ ಬಳಕೆ ಮಾಡಿಕೊಳ್ಳಬಹುದು. ವಸತಿಗೃಹಗಳನ್ನು ಸ್ಥಳಾಂತರ ಮಾಡುವುದು ಸರಿಯಲ್ಲ. ದೇವಸಮುದ್ರ ಹೋಬಳಿ ಗ್ರಾಮಗಳು ಹಾಗೂ ನೆರೆಯ ತಾಲ್ಲೂಕುಗಳನ್ನು ಗಮನದಲ್ಲಿ ಇಟ್ಟುಕೊಂಡು ಹಾನಗಲ್ ರಸ್ತೆಯಲ್ಲಿ ಆಸ್ಪತ್ರೆ ನಿರ್ಮಾಣ ಸೂಕ್ತವಾಗಿದೆ. ಈ ಬಗ್ಗೆ ಸರ್ಕಾರ ಅಧಿಕಾರಿಗಳು ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು. ಯಾರಿಗೂ ತೊಂದರೆಯಾಗುವುದು ಬೇಡ’ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಹೇಳಿದರು.
ಕಪ್ಪುಪಟ್ಟಿ ಪ್ರದರ್ಶನ ಇಲ್ಲ..
ಸಾರ್ವಜನಿಕ ಆಸ್ಪತ್ರೆ ಸೇರಿ ತಾಲ್ಲೂಕಿನ ಆಸ್ಪತ್ರೆಗಳಲ್ಲಿ ಸಿಬ್ಬಂದಿ ವೈದ್ಯರು ತಂತ್ರಜ್ಞರ ಕೊರತೆ ನೀಗಿಸುವುದು ಸೇರಿ ವಿವಿಧ ಬೇಡಿಕೆ ಮುಂದಿಟ್ಟು ಸಚಿವ ದಿನೇಶ್‌ ಗುಂಡೂರಾವ್‌ ಭೇಟಿ ವೇಳೆ ರೈತ ಸಂಘ ಹಮ್ಮಿಕೊಂಡಿದ್ದ ಕಪ್ಪುಪಟ್ಟಿ ಪ್ರದರ್ಶನವನ್ನು ಕೊನೆ ಸಮಯದಲ್ಲಿ ಹಿಂದಕ್ಕೆ ಪಡೆಯಲಾಯಿತು. ಅಧಿಕಾರಿಗಳು ಪೊಲೀಸರು ಸಮಸ್ಯೆ ಬಗ್ಗೆ ಸಚಿವರಿಗೆ ಮನವರಿಕೆ ಮಾಡಲಾಗುವುದು ಎಂದು ಹೇಳಿದ ಕಾರಣ ವಾಪಸ್‌ ಪಡೆದು ಹಾನಗಲ್‌ನಲ್ಲಿ ಮನವಿ ಸಲ್ಲಿಸಿದರು. ಮುಖಂಡರಾದ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮರ್ಲಹಳ್ಳಿ ರವಿಕುಮಾರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT