‘ಈ ತಂತ್ರಜ್ಞಾನದಲ್ಲಿ ಬಳ್ಳಿ ಸ್ವಚ್ಛವಾಗಿ ಕೈ ಸೇರುತ್ತದೆ. ಕಾಯಿ ಕಟಾವು ಉತ್ತಮವಾಗಿ ಆಗುತ್ತದೆ. ಟ್ರ್ಯಾಕ್ಟರ್ ಬಳಸುವ ಕಾರಣ ಮಾಗಿ ಉಳುಮೆ ಮಾಡಿದಂತಾಗುತ್ತದೆ. ಜತೆಗೆ ಹಣ, ಸಮಯ ಉಳಿತಾಯವಾಗುತ್ತದೆ. ಕೂಲಿ ಕಾರ್ಮಿಕರ ಸಮಸ್ಯೆಯನ್ನೂ ನೀಗಿಸುತ್ತದೆ. ತಾಲ್ಲೂಕಿನ ಹಾನಗಲ್, ರಾಂಪುರ ಧರ್ಮಸ್ಥಳ ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ಯಂತ್ರ ಲಭ್ಯವಿದ್ದು, ಬಾಡಿಗೆ ಆಧಾರಲ್ಲಿ ಪಡೆಯಬಹುದು’ ಎಂದು ಹೇಳಿದರು.