ಮಸ್ಕಲ್ ಗ್ರಾಮದ ಸಮೀಪದ ಮಳಿಯಾನ ಕಾಲೊನಿಯಲ್ಲಿ ಕ್ರೈಸ್ತ ಸಮುದಾಯದ ಮಹಿಳೆಯರಿಗೆ ಜೀವ ಬೆದರಿಕೆಯೊಡ್ಡಿ ಬೈಬಲ್ ಅನ್ನು ಬಹಿರಂಗವಾಗಿ ಸುಟ್ಟು ಹಾಕಲಾಗಿದೆ. ಇದರ ಹಿಂದೆ ಕೇಸರೀಕರಣದ ಕೈವಾಡವಿದೆ. ಈ ಪ್ರಕರಣಗಳ ಬಗ್ಗೆ ಸೂಕ್ತ ಕ್ರಮ ವಹಿಸಿ ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು ಎಂದು ಆಗ್ರಹಿಸಿದರು. ಎಸ್ಡಿಪಿಐ ಉಪಾಧ್ಯಕ್ಷ ಕಾಮ್ರಾನ್ ಅಲಿ, ಕಾರ್ಯದರ್ಶಿ ಸೈಯದ್ ಸಾದತ್, ತಾಲ್ಲೂಕು ಘಟಕದ ಅಧ್ಯಕ್ಷ ಜಾಕೀರ್ ಹುಸೇನ್, ಹಿರಿಯೂರು ತಾಲ್ಲೂಕು ಘಟಕದ ಅಧ್ಯಕ್ಷ ಖಾಲಿದ್, ಉಪಾಧ್ಯಕ್ಷ ಮುಜಾಹಿದ್ ಇದ್ದರು.