ಬುಧವಾರ ರಾತ್ರಿ ಹಿರಿಯೂರು ತಾಲ್ಲೂಕಿನ ಬುರುಜನರೊಪ್ಪ ಗ್ರಾಮ ತಲುಪಿದ್ದ ಪಾದಯಾತ್ರೆ ಅಲ್ಲಿಯೇ ತಂಗಿತ್ತು. ಗುರುವಾರ ನಸುಕಿನಲ್ಲಿ ಅಲ್ಲಿಂದ ಹೊರಟು ಐಮಂಗಲ ತಲುಪಿತು. ಸಚಿವರಾದ ಮುರುಗೇಶ ನಿರಾಣಿ, ಸಿ.ಸಿ.ಪಾಟೀಲ, ಶಾಸಕರಾದ ಮಹೇಶ ಕುಮಠಳ್ಳಿ, ಅರವಿಂದ ಬೆಲ್ಲದ ಹಾಗೂ ಅರುಣ್ ಪೂಜಾರ್ ನೇತೃತ್ವದ ನಿಯೋಗ ಸ್ವಾಮೀಜಿ ಅವರೊಂದಿಗೆ ಮಾತುಕತೆ ನಡೆಸಿತು.