ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಾಜ ತುಂಬಾ ವಿಷಮ ಸ್ಥಿತಿಯತ್ತ ಸಾಗುತ್ತಿದೆ. ಸಂವೇದನಾಶೀಲತೆ ಸತ್ತು ಹೋಗಿದೆ. ಪ್ರೀತಿ–ಪ್ರೇಮ ಸಂಬಂಧ ಸಡಿಲಗೊಂಡಿವೆ. ಆಕ್ರೋಶ, ದ್ವೇಷಪೂರಿತ ವಾತಾವರಣ ನಿರ್ಮಾಣವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಾಹಿತ್ಯ ಮಾತ್ರ ಜನರಿಗೆ ಆಸರೆಯಾಗಬಲ್ಲದು’ ಎಂದು ಹೇಳಿದರು.