<p><strong>ಹೊಸದುರ್ಗ:</strong> ತಾಲ್ಲೂಕಿನ ಶ್ರೀರಾಂಪುರ ಹೋಬಳಿಯ ಸೋಮೇನಹಳ್ಳಿ ಗ್ರಾಮದ ನಾಲ್ಕು ಜನ ರೈತರಿಗೆ ಸೇರಿದ ತೆನೆ ಸಹಿತ ರಾಗಿ ಬಣವೆಗೆ ಸೋಮವಾರ ನಸುಕಿನ ಜಾವದಲ್ಲಿ ಆಕಸ್ಮಿಕ ತಗುಲಿ ಹೊತ್ತಿ ಉರಿದಿದೆ. ಅಪಾರ ನಷ್ಟವಾಗಿದ್ದು ರೈತರು ಸಂಕಷ್ಟದಲ್ಲಿದ್ದಾರೆ.</p>.<p>ರಂಗಪ್ಪ, ಗಂಗಾಧರ, ಗೀತಮ್ಮ ಹಾಗೂ ರೇಣುಕಮ್ಮ ಇವರಿಗೆ ಸೇರಿದ ಬಣವೆ ಸಂಪೂರ್ಣವಾಗಿ ಭಸ್ಮವಾಗಿದೆ. ₹ ಲಕ್ಷ ಮೌಲ್ಯದ 30 ಲೋಡ್ ತೆನೆ ಸಹಿತ ಹುಲ್ಲು ಭಸ್ಮವಾಗಿದೆ.</p>.<p>‘ಜಾತ್ರೆ ಮುಗಿಸಿ ಸುಗ್ಗಿ ಮಾಡಬೇಕೆಂದು ಹಾಗೆ ಉಳಿಸಿಕೊಂಡಿದ್ದೆವು. ಇನ್ನೊಂದೆರಡು ದಿನಗಳಲ್ಲಿ ಸುಗ್ಗಿ ಮಾಡಬೇಕಿತ್ತು. ಅಷ್ಟರಲ್ಲಿ ಹೀಗಾಗಿದೆ. ಇಷ್ಟು ದಿನ ಕಷ್ಟಪಟ್ಟಿದ್ದು, ಒಂದೇ ಗಂಟೆಯಲ್ಲೇ ವ್ಯರ್ಥವಾಗಿ ಹೋಗಿದೆ. ಮನೆಯಲ್ಲಿ ರಾಗಿಯೂ ಸಹ ಇಲ್ಲ. ದನಕರುಗಳಿಗೂ ಮೇವಿಲ್ಲ’ ಎಂದು ರೈತ ರಂಗಪ್ಪ ಅಳಲು ತೋಡಿಕೊಂಡರು.</p>.<p>ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.</p>.<p>ಅಗ್ನಿಶಾಮಕ ದಳದ ಸಹಾಯಕ ಠಾಣಾಧಿಕಾರಿ ಎಚ್. ಬಸವರಾಜಪ್ಪ, ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸದುರ್ಗ:</strong> ತಾಲ್ಲೂಕಿನ ಶ್ರೀರಾಂಪುರ ಹೋಬಳಿಯ ಸೋಮೇನಹಳ್ಳಿ ಗ್ರಾಮದ ನಾಲ್ಕು ಜನ ರೈತರಿಗೆ ಸೇರಿದ ತೆನೆ ಸಹಿತ ರಾಗಿ ಬಣವೆಗೆ ಸೋಮವಾರ ನಸುಕಿನ ಜಾವದಲ್ಲಿ ಆಕಸ್ಮಿಕ ತಗುಲಿ ಹೊತ್ತಿ ಉರಿದಿದೆ. ಅಪಾರ ನಷ್ಟವಾಗಿದ್ದು ರೈತರು ಸಂಕಷ್ಟದಲ್ಲಿದ್ದಾರೆ.</p>.<p>ರಂಗಪ್ಪ, ಗಂಗಾಧರ, ಗೀತಮ್ಮ ಹಾಗೂ ರೇಣುಕಮ್ಮ ಇವರಿಗೆ ಸೇರಿದ ಬಣವೆ ಸಂಪೂರ್ಣವಾಗಿ ಭಸ್ಮವಾಗಿದೆ. ₹ ಲಕ್ಷ ಮೌಲ್ಯದ 30 ಲೋಡ್ ತೆನೆ ಸಹಿತ ಹುಲ್ಲು ಭಸ್ಮವಾಗಿದೆ.</p>.<p>‘ಜಾತ್ರೆ ಮುಗಿಸಿ ಸುಗ್ಗಿ ಮಾಡಬೇಕೆಂದು ಹಾಗೆ ಉಳಿಸಿಕೊಂಡಿದ್ದೆವು. ಇನ್ನೊಂದೆರಡು ದಿನಗಳಲ್ಲಿ ಸುಗ್ಗಿ ಮಾಡಬೇಕಿತ್ತು. ಅಷ್ಟರಲ್ಲಿ ಹೀಗಾಗಿದೆ. ಇಷ್ಟು ದಿನ ಕಷ್ಟಪಟ್ಟಿದ್ದು, ಒಂದೇ ಗಂಟೆಯಲ್ಲೇ ವ್ಯರ್ಥವಾಗಿ ಹೋಗಿದೆ. ಮನೆಯಲ್ಲಿ ರಾಗಿಯೂ ಸಹ ಇಲ್ಲ. ದನಕರುಗಳಿಗೂ ಮೇವಿಲ್ಲ’ ಎಂದು ರೈತ ರಂಗಪ್ಪ ಅಳಲು ತೋಡಿಕೊಂಡರು.</p>.<p>ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.</p>.<p>ಅಗ್ನಿಶಾಮಕ ದಳದ ಸಹಾಯಕ ಠಾಣಾಧಿಕಾರಿ ಎಚ್. ಬಸವರಾಜಪ್ಪ, ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>