ಬೆಂಗಳೂರು–ಹೊಸಪೇಟೆ, ಹೊಸಪೇಟೆ–ಬೆಂಗಳೂರು ರೈಲು 20 ದಿನಗಳ ಕಾಲ ಚಿತ್ರದುರ್ಗ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಮಾಡುವುದಿಲ್ಲ. ಯಶವಂತಪು– ಜೈಪುರ ಸುವಿಧಾ ವಿಶೇಷ ರೈಲು, ಮೈಸೂರು–ಶಿರಡಿ ಸಾಯಿನಗರ ರೈಲು, ಮೈಸೂರು–ವಾರಣಸಿ ಎಕ್ಸ್ಪ್ರೆಸ್ ವಿಶೇಷ ರೈಲುಗಳು ಚಿತ್ರದುರ್ಗ ರೈಲ್ವೆ ನಿಲ್ದಾಣಕ್ಕೆ ಸೇವೆ ಒದಗಿಸುವುದಿಲ್ಲ ಎಂದು ನೈಋತ್ಯ ರೈಲ್ವೆಯ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಡಾ.ಮಂಜುನಾಥ್ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.