ಚಿತ್ರದುರ್ಗ: ಜಿಲ್ಲೆಯಾದ್ಯಂತ ವರುಣನ ಆರ್ಭಟ ಮುಂದುವರಿದಿದ್ದು, ಬುಧವಾರ ಸಂಜೆಗೆ ಮಳೆ ಪುನಃ ಬಿರುಸು ಪಡೆಯಿತು. ಮಂಗಳವಾರ ತಡರಾತ್ರಿಯಿಂದ ಮುಂಜಾನೆವರೆಗೂ ಮಳೆ ಸುರಿದ ಕಾರಣ ಬೆಳಿಗ್ಗೆ ಜಿಟಿಜಿಟಿ ಹನಿಯ ಮೋಡಕವಿದ ವಾತಾವರಣ ಇತ್ತು.
ಬಿಟ್ಟು ಬಿಡದೆ ಮಳೆ ಸುರಿಯುತ್ತಿರುವುದರಿಂದ ನಗರದ ಹೊಂಡಗಳು ಬಹುತೇಕ ತುಂಬುವ ಹಂತಕ್ಕೆ ತಲುಪಿವೆ. ತಗ್ಗು ಪ್ರದೇಶಕ್ಕೆ ನೀರು ನುಗ್ಗುತ್ತಿರುವುದರಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಿರಿಯೂರು ತಾಲ್ಲೂಕಿನ ಇಕ್ಕನೂರಿನಲ್ಲಿ 88 ಮಿ.ಮೀ ಅತ್ಯಧಿಕ ಮಳೆ ದಾಖಲಾಗಿದೆ.