<p><strong>ಮೊಳಕಾಲ್ಮುರು:</strong> ಜಿಲ್ಲೆಯ ಮುಖ್ಯ ಜಾತ್ರೆಗಳಲ್ಲಿ ಒಂದಾದ ತಾಲ್ಲೂಕಿನ ರಾಯಾಪುರದ ಕೋಟೆಗುಡ್ಡ ಮಾರಮ್ಮದೇವಿ ಜಾತ್ರೆಗೆ ಜ.6 ರಂದು ಚಾಲನೆ ಸಿಗಲಿದೆ.</p>.<p>ಪ್ರತಿವರ್ಷ ಶೂನ್ಯಮಾಸದಲ್ಲಿ ಈ ಜಾತ್ರೆ ನಡೆಯುವುದು ವಾಡಿಕೆ. ಪ್ರಯುಕ್ತ 6ರಂದು ದೇವಿ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಗಂಗಾಪೂಜೆಗೆ ತೆಗೆದು ಹೋಗಲಾಗುವುದು. ಸಂಜೆ ಅಗ್ನಿಕುಂಡ, ಕಾಸುಮೀಸಲು ಅರ್ಪಣೆ ಕಾರ್ಯ ನಡೆಯಲಿವೆ.</p>.<p>7ರಂದು ದೇವಿಗೆ ವಿಶೇಷ ಪೂಜೆ, ಸಂಜೆ ವೀರಪೋತರಾಜುಲು ಅವರಿಂದ ಪೂಜೆ ಸಲ್ಲಿಕೆ, ಸಂಜೆ 4.30ಕ್ಕೆ ದೇವಸ್ಥಾನ ಮುಂಭಾಗದಲ್ಲಿ ಪ್ರಸಿದ್ಧ ಸಿಡಿ ಉತ್ಸವ ಜರುಗಲಿದೆ. ಶುಕ್ರವಾರ ಬೆಳಿಗ್ಗೆ ದೇವಿಯನ್ನು ಗುಡಿದುಂಬಿಸುವ ಮೂಲಕ ಜಾತ್ರೆಗೆ ತೆರೆಬೀಳಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.</p>.<p>ದೇವಿ ಹಿನ್ನೆಲೆ: ದೇವಿಯ ಮೂಲ ಆಂಧ್ರಪ್ರದೇಶದ ರಾಯದುರ್ಗ ತಾಲ್ಲೂಕಿನ ಪೈತೋಟವಾಗಿದ್ದು, ಅಲ್ಲಿಂದ ಇಲ್ಲಿಗೆ ತಂದು ಗುಡಿಸಲಿನಲ್ಲಿ ಮೊದಲು ಪ್ರತಿಷ್ಠಾಪನೆ ಮಾಡಲಾಯಿತು. 1979ರಲ್ಲಿ ದೇವಿ ಅಪ್ಪಣೆಯಂತೆ ನೀರು ಉಪಯೋಗ ಮಾಡದೇ ಹಾಲು, ತುಪ್ಪ, ಮೊಸರು ಬಳಸಿ 7 ದಿನದಲ್ಲಿ ದೇವಸ್ಥಾನ ನಿರ್ಮಾಣ ಮಾಡಿ ದೇವಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು. ರೋಗ ನಿವಾರಕಿ, ಹರಕೆ ತೀರಿಸುವ ದೇವಿ ಎಂದು ಪ್ರಸಿದ್ಧಿ ಪಡೆದಿದ್ದು, ಹಸಿರುಬಳೆ, ಹಸಿರುಸೀರೆ ಅರ್ಪಿಸಲಾಗುತ್ತದೆ ಎಂದು ಹಿರಿಯರು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೊಳಕಾಲ್ಮುರು:</strong> ಜಿಲ್ಲೆಯ ಮುಖ್ಯ ಜಾತ್ರೆಗಳಲ್ಲಿ ಒಂದಾದ ತಾಲ್ಲೂಕಿನ ರಾಯಾಪುರದ ಕೋಟೆಗುಡ್ಡ ಮಾರಮ್ಮದೇವಿ ಜಾತ್ರೆಗೆ ಜ.6 ರಂದು ಚಾಲನೆ ಸಿಗಲಿದೆ.</p>.<p>ಪ್ರತಿವರ್ಷ ಶೂನ್ಯಮಾಸದಲ್ಲಿ ಈ ಜಾತ್ರೆ ನಡೆಯುವುದು ವಾಡಿಕೆ. ಪ್ರಯುಕ್ತ 6ರಂದು ದೇವಿ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಗಂಗಾಪೂಜೆಗೆ ತೆಗೆದು ಹೋಗಲಾಗುವುದು. ಸಂಜೆ ಅಗ್ನಿಕುಂಡ, ಕಾಸುಮೀಸಲು ಅರ್ಪಣೆ ಕಾರ್ಯ ನಡೆಯಲಿವೆ.</p>.<p>7ರಂದು ದೇವಿಗೆ ವಿಶೇಷ ಪೂಜೆ, ಸಂಜೆ ವೀರಪೋತರಾಜುಲು ಅವರಿಂದ ಪೂಜೆ ಸಲ್ಲಿಕೆ, ಸಂಜೆ 4.30ಕ್ಕೆ ದೇವಸ್ಥಾನ ಮುಂಭಾಗದಲ್ಲಿ ಪ್ರಸಿದ್ಧ ಸಿಡಿ ಉತ್ಸವ ಜರುಗಲಿದೆ. ಶುಕ್ರವಾರ ಬೆಳಿಗ್ಗೆ ದೇವಿಯನ್ನು ಗುಡಿದುಂಬಿಸುವ ಮೂಲಕ ಜಾತ್ರೆಗೆ ತೆರೆಬೀಳಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.</p>.<p>ದೇವಿ ಹಿನ್ನೆಲೆ: ದೇವಿಯ ಮೂಲ ಆಂಧ್ರಪ್ರದೇಶದ ರಾಯದುರ್ಗ ತಾಲ್ಲೂಕಿನ ಪೈತೋಟವಾಗಿದ್ದು, ಅಲ್ಲಿಂದ ಇಲ್ಲಿಗೆ ತಂದು ಗುಡಿಸಲಿನಲ್ಲಿ ಮೊದಲು ಪ್ರತಿಷ್ಠಾಪನೆ ಮಾಡಲಾಯಿತು. 1979ರಲ್ಲಿ ದೇವಿ ಅಪ್ಪಣೆಯಂತೆ ನೀರು ಉಪಯೋಗ ಮಾಡದೇ ಹಾಲು, ತುಪ್ಪ, ಮೊಸರು ಬಳಸಿ 7 ದಿನದಲ್ಲಿ ದೇವಸ್ಥಾನ ನಿರ್ಮಾಣ ಮಾಡಿ ದೇವಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು. ರೋಗ ನಿವಾರಕಿ, ಹರಕೆ ತೀರಿಸುವ ದೇವಿ ಎಂದು ಪ್ರಸಿದ್ಧಿ ಪಡೆದಿದ್ದು, ಹಸಿರುಬಳೆ, ಹಸಿರುಸೀರೆ ಅರ್ಪಿಸಲಾಗುತ್ತದೆ ಎಂದು ಹಿರಿಯರು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>