<p>ಹೊಸದುರ್ಗ: ತಾಲ್ಲೂಕಿನ ಹಿಂಡಿದೇವರ ಹಟ್ಟಿ ಗ್ರಾಮದ ಗಾಯತ್ರಿ ಹಾಗೂ ರಾಜಪ್ಪ ಅವರ ಪುತ್ರ ಮಲ್ಲೇಶ್ (12) ಕುರಿ ಮೇಯಿಸಲು ಹಿಂಡಿದೇವರಹಟ್ಟಿ ಹಾಗೂ ಬೇವಿನಹಳ್ಳಿ ಸಂಪರ್ಕ ರಸ್ತೆಯಲ್ಲಿ ಹೋಗುತ್ತಿರುವಾಗ ಹಿನ್ನೀರಿನಲ್ಲಿ ಕಾಲು ಜಾರಿ ಬಿದ್ದಿರುವ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.</p>.<p>ಹಿಂಡಿದೇವರಹಟ್ಟಿ ಹಾಗೂ ಬೇವಿನಹಳ್ಳಿಯಲ್ಲಿ ಹೊಸದಾಗಿ ರಸ್ತೆ ನಿರ್ಮಿಸಲಾಗಿದೆ. ಇಲ್ಲಿ ಸಂಪರ್ಕ ಸೇತುವೆ ನಿರ್ಮಿಸುವ ಕಾರ್ಯ ನಡೆಯುತ್ತಿದ್ದು, ಕೆಲಸಗಾರರು ಓಡಾಡಲು ಚಿಕ್ಕಜಾಗ ಮಾಡಿಕೊಂಡಿದ್ದರು. ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಬಾಲಕ ಪಕ್ಕಕ್ಕೆ ಜರುಗಿ, ಕಾಲು ಜಾರಿ ಹಿಂಡಿದೇವರಹಟ್ಟಿ ಸಮೀಪ ವಿವಿ ಸಾಗರದ ಹಿನ್ನೀರಿನಲ್ಲಿ ಬಿದ್ದಿದ್ದಾನೆ.</p>.<p>ಅಗ್ನಿಶಾಮಕ ಠಾಣೆ ಸಿಬ್ಬಂದಿ ಬಾಲಕನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದು, ರಾತ್ರಿ 7 ಗಂಟೆಯವರೆಗೂ ಪತ್ತೆಯಾಗಿಲ್ಲ.</p>.<p>ತಹಶೀಲ್ದಾರ್, ಬಿಇಒ, ಗ್ರಾಮ ಲೆಕ್ಕಾಧಿಕಾರಿ, ಶ್ರೀರಾಂಪುರ ಪೊಲೀಸ್ ಸಿಬ್ಬಂದಿ ಸಮ್ಮುಖದಲ್ಲಿ ಶೋಧಕಾರ್ಯ ನಡೆಯುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊಸದುರ್ಗ: ತಾಲ್ಲೂಕಿನ ಹಿಂಡಿದೇವರ ಹಟ್ಟಿ ಗ್ರಾಮದ ಗಾಯತ್ರಿ ಹಾಗೂ ರಾಜಪ್ಪ ಅವರ ಪುತ್ರ ಮಲ್ಲೇಶ್ (12) ಕುರಿ ಮೇಯಿಸಲು ಹಿಂಡಿದೇವರಹಟ್ಟಿ ಹಾಗೂ ಬೇವಿನಹಳ್ಳಿ ಸಂಪರ್ಕ ರಸ್ತೆಯಲ್ಲಿ ಹೋಗುತ್ತಿರುವಾಗ ಹಿನ್ನೀರಿನಲ್ಲಿ ಕಾಲು ಜಾರಿ ಬಿದ್ದಿರುವ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.</p>.<p>ಹಿಂಡಿದೇವರಹಟ್ಟಿ ಹಾಗೂ ಬೇವಿನಹಳ್ಳಿಯಲ್ಲಿ ಹೊಸದಾಗಿ ರಸ್ತೆ ನಿರ್ಮಿಸಲಾಗಿದೆ. ಇಲ್ಲಿ ಸಂಪರ್ಕ ಸೇತುವೆ ನಿರ್ಮಿಸುವ ಕಾರ್ಯ ನಡೆಯುತ್ತಿದ್ದು, ಕೆಲಸಗಾರರು ಓಡಾಡಲು ಚಿಕ್ಕಜಾಗ ಮಾಡಿಕೊಂಡಿದ್ದರು. ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಬಾಲಕ ಪಕ್ಕಕ್ಕೆ ಜರುಗಿ, ಕಾಲು ಜಾರಿ ಹಿಂಡಿದೇವರಹಟ್ಟಿ ಸಮೀಪ ವಿವಿ ಸಾಗರದ ಹಿನ್ನೀರಿನಲ್ಲಿ ಬಿದ್ದಿದ್ದಾನೆ.</p>.<p>ಅಗ್ನಿಶಾಮಕ ಠಾಣೆ ಸಿಬ್ಬಂದಿ ಬಾಲಕನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದು, ರಾತ್ರಿ 7 ಗಂಟೆಯವರೆಗೂ ಪತ್ತೆಯಾಗಿಲ್ಲ.</p>.<p>ತಹಶೀಲ್ದಾರ್, ಬಿಇಒ, ಗ್ರಾಮ ಲೆಕ್ಕಾಧಿಕಾರಿ, ಶ್ರೀರಾಂಪುರ ಪೊಲೀಸ್ ಸಿಬ್ಬಂದಿ ಸಮ್ಮುಖದಲ್ಲಿ ಶೋಧಕಾರ್ಯ ನಡೆಯುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>