‘ಪರೀಕ್ಷಾ ಕೇಂದ್ರಗಳು ಎರಡು ಇರುವೆಡೆ 4 ಮಾಡಿ ಪರೀಕ್ಷೆ ನಡೆಸಬೇಕು. ಶಿಕ್ಷಣ ಸಚಿವರೂ ಎಂದಿನಂತೆ ಸುಗಮವಾಗಿ ನಡೆಸಬೇಕು ಎಂಬ ಉದ್ದೇಶದಿಂದ ರಾಜ್ಯದಾದ್ಯಂತ ಓಡಾಡುತ್ತಿದ್ದಾರೆ. ಇದರಲ್ಲಿ ಅಧಿಕಾರಿಗಳ ಜವಾಬ್ದಾರಿಯೂ ಹೆಚ್ಚಿದೆ’ ಎಂದ ಅವರು, ‘ರಾಜ್ಯ ಸರ್ಕಾರ ಈವರೆಗೆ ನಮ್ಮ ಸಲಹೆ, ಸೂಚನೆ ಕೇಳಿಲ್ಲ. ವಿರೋಧ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಿತಿ ರಚಿಸಿದರೆ ಅಗತ್ಯ ಸಲಹೆ ನೀಡಲಿದ್ದೇವೆ’ ಎಂದು ಹೇಳಿದರು.