‘ವಿವೇಕ ಎಂಬ ಸೂರ್ಯ, ಸುಜ್ಞಾನ ಎನ್ನುವ ಚಂದಿರ ಮಾನವರೊಳಗೆ ಇವೆ. ಸರಿದಾರಿಯಲ್ಲಿ ನಡೆದರೆ ಪರಮಾರ್ಥ ಪ್ರವೇಶವಾಗಿ ಬದುಕು ಹೊಳೆಯುವ ಪ್ರಕಾಶದಂತೆ ರೂಪುಗೊಳ್ಳುತ್ತದೆ. ಇಲ್ಲದಿದ್ದರೆ, ಜ್ವಾಲೆಯೊಳಗೆ ನೊಂದು, ಬೆಂದು ಸುಡುವುದರ ಜತೆಗೆ ನಾಶಕ್ಕೆ ನಾಂದಿಯಾಗುತ್ತದೆ. ಬಸವಾದಿ ಶರಣರ, ಮಹಾನುಭಾವರ ತತ್ವಾದರ್ಶ ಪಾಲಿಸಬೇಕಿದೆ’ ಎಂದು ಸಲಹೆ ನೀಡಿದರು.